ನಾಲ್ಕೂರು : ಆದರ್ಶ ಯೂತ್ ಕ್ಲಬ್ ವತಿಯಿಂದ ಹಣ್ಣಿನ ಗಿಡ ವಿತರಣೆ

0


ನಾಲ್ಕೂರು ಗ್ರಾಮದಲ್ಲಿರುವ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಇದರ ವತಿಯಿಂದ ಕ್ಲಬ್ಬಿನ ಸದಸ್ಯರಿಗೆ ಪ್ರಕೃತಿ ಮತ್ತು ಪರಿಸರ ಸಂರಕ್ಷಣೆ ಕಾರ್ಯಕ್ರಮದ ಅಡಿ ಉಚಿತವಾಗಿ ಹಣ್ಣಿನ ಗಿಡ ವಿತರಿಸುವ ಕಾರ್ಯಕ್ರಮ ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ನಿನ್ನೆ ನಡೆಯಿತು. ಸಭಾಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷ ಸತೀಶ್ ಬಂಬುಳಿ ವಹಿಸಿದರು.

ವೇದಿಕೆಯಲ್ಲಿ ಕ್ಲಬ್ಬಿನ ಗೌರವಾಧ್ಯಕ್ಷ ದಿನೇಶಹಾಲೆಮಜಲು, ಕಾರ್ಯದರ್ಶಿ ದೀಪಕ್ ಕುಂಬಡ್ಕ ಉಪಸಿತರಿದ್ದರು. ಸಭೆಯಲ್ಲಿ ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷರುಗಳು ಕಬ್ಬಿನ ಸದಸ್ಯರುಗಳು ಉಪಸ್ಥಿತರಿದ್ದರು.
(ವರದಿ: ಡಿ.ಹೆಚ್.)