ಭಾರೀ ಮಳೆಗೆ ಪಂಜ ಸೇತುವೆ ಮುಳುಗಡೆ : ಪಂಜ -ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತ

0

ಭಾರಿ ಮಳೆಯಿಂದಾಗಿ ಜು.24 ರಂದು ಸಂಜೆ ಪಂಜ ಹೊಳೆ ಉಕ್ಕಿ ಹರಿಯುತ್ತಿದ್ದು ಮಂಜೇಶ್ವರ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾದು ಹೋಗುವ ಪಂಜದ ಪಲ್ಲೋಡಿ ಸೇತುವೆ ಮುಳುಗಡೆ ಗೊಂಡಿದ್ದು ಪಂಜ- ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತ ಗೊಂಡಿದೆ.

ಅಲ್ಲೇ ಸಮೀಪ ಬೊಳ್ಮಲೆಯಲ್ಲಿ
ಹೊಳೆಯ ನೆರೆ ನೀರು ಹೆದ್ದಾರಿಯಲ್ಲಿ ತುಂಬಿದೆ.ಹೊಳೆ ಸಮೀಪದ ಕೃಷಿ ಭೂಮಿಗಳು ಜಲಾವೃತ ಗೊಂಡಿದೆ.
ಪಂಜ-ಕಡಬ ರಸ್ತೆಗೆ ಪುಳಿಕುಕ್ಕು ಎಂಬಲ್ಲಿ ಹೊಳೆ ನೀರು ಆವರಿಸಿ ಸಂಚಾರ ಸ್ಥಗಿತಗೊಂಡಿದ್ದು ನೀರಿನ ಮಟ್ಟ ಏರಿಕೆಯಾಗುತ್ತಿದೆ.

.