ಐವರ್ನಾಡು ರಬ್ಬರ್ ಬೆಳೆಗಾರರ ಸಂಘದ ವತಿಯಿಂದ ವಿಚಾರ ಸಂಕಿರಣ, ಸನ್ಮಾನ ಕಾರ್ಯಕ್ರಮ

0

ಐವರ್ನಾಡು ರಬ್ಬರ್ ಬೆಳೆಗಾರರ ಸಂಘದ ವತಿಯಿಂದ ವಿಚಾರ ಸಂಕಿರಣ ಹಾಗೂ ಸನ್ಮಾನ ಕಾರ್ಯಕ್ರಮವು ಜು.27 ರಂದು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ಪುತ್ತೂರು ರಬ್ಬರ್ ಬೋರ್ಡ್ ಪ್ರಾದೇಶಿಕ ಕಚೇರಿ ಉಪರಬ್ಬರ್ ಉತ್ಪಾದನಾ ಆಯುಕ್ತ ಸುರೇಶ್ ಡಿ.ವಿಚಾರ ಸಂಕಿರಣ ನಡೆಸಿಕೊಟ್ಟರು.
ಬಳಿಕ ಸಂಘದ ವತಿಯಿಂದ ಅವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸನ್ಮಾನ ನೆರವೇರಿಸಿ ಮಾತನಾಡಿದರು.


ಸಂಘದ ಅಧ್ಯಕ್ಷ ರಾಜಾರಾಮ ರಾವ್ ಉದ್ದಂಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪುತ್ತೂರು ಸಹಾಯಕ ಅಭಿವೃದ್ಧಿ ಅಧಿಕಾರಿ ಸಾಜಿ ಮ್ಯಾಥ್ಯೂ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ಮಿತ್ತಮೂಲೆ,ಕೋಶಾಧಿಕಾರಿ ಶ್ರೀನಿವಾಸ ಮಡ್ತಿಲ, ಕಾರ್ಯದರ್ಶಿ ಧನಂಜಯ,ನಿರ್ದೇಶಕರಾದ ದೇವದಾಸ ಕೆ.ವಿ, ಗಣೇಶ ಕೆ.ಎಚ್, ಶ್ರೀಧರ ಎಂ, ಸದಾನಂದ ಬಿ ,ಸಿಬ್ಬಂದಿ ಭಾಸ್ಕರ ಕೆ ಹಾಗೂ ರಬ್ಬರು ಬೆಳೆಗಾರರು ಉಪಸ್ಥಿತರಿದ್ದರು.