ಕೊಡಿಯಾಲ : ಬೀಳುವ ಸ್ಥಿತಿಯಲ್ಲಿರುವ ಮನೆ – ಜಿಲ್ಲಾಧಿಕಾರಿಗೆ ಮನವಿ

0

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ – ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ರಾಮ ಬೈರ ಎಂಬವರ ಮನೆಯೊಂದು ಜರಿದಿದ್ದು ಅಪಾಯದ ಸ್ಥಿತಿಯಲ್ಲಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು.


ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸುಳ್ಯ ತಹಶೀಲ್ದಾರರಿಗೆ ತಿಳಿಸಿದ್ದು ಸ್ಥಳಕ್ಕೆ ತಹಶೀಲ್ದಾರರು ಜು.28 ರಂದು ಭೇಟಿ ನೀಡಿದರು.ಮನೆಯನ್ನು ಪರಿಶೀಲಿಸಿದ ತಹಶೀಲ್ದಾರರು ಮನೆಯಲ್ಲಿ ವಾಸ ಮಾಡಲು ಅಸಾಧ್ಯವಿರುವ ಕಾರಣ ಮನೆಯಲ್ಲಿರುವವರನ್ನು ಬೇರೆ ಕಡೆ ಸ್ಥಳಾಂತರಿಸಲು ಸೂಚಿಸಿದರೆಂದು ತಿಳಿದುಬಂದಿದೆ.


ಮಳೆಗಾಲದಲ್ಲಿ ಮನೆಯು ಜರಿದು ಬೀಳುವ ಹಂತದಲ್ಲಿದ್ದು ಮನೆಯಲ್ಲಿರುವವರನ್ನು ಬೇರೆ ಕಡೆ ವಾಸ ಮಾಡಲು ಹೇಳಿ ಹೊಸ ಮನೆ ನಿರ್ಮಿಸಲು ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.


ಗ್ರಾಮಸ್ಥರಾದ ಕೆ.ಕೆ.ನಾಯ್ಕ್ ರವರು ಜಿಲ್ಲಾಧಿಕಾರಿಗಳಿಗೆ ವಾಟ್ಸಾಪ್ ಮೂಲಕ ಮನವಿ ಸಲ್ಲಿಸಿದ್ದರು.ಈ ಹಿಂದೆಯೂ ಇವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎರಡು ಮನೆ ಮಂಜೂರುಗೊಳಿಸಿದ್ದರು.
ದಾಮೋದರ ಟೈಲರ್ ಸಹಕರಿಸಿದ್ದರು.