ನೇಸರ ಯುವಕ ಮಂಡಲದ ಸದಸ್ಯರಿಂದ ಶ್ರಮದಾನ

0

ಕುಂಡಡ್ಕ-ಚಾಮುಂಡಿಮೂಲೆ ತನಕ ರಸ್ತೆ ದುರಸ್ತಿ

ಬೆಳ್ಳಾರೆ- ಸವಣೂರು ಸಂಪರ್ಕ ರಸ್ತೆಯ ಕುಂಡಡ್ಕದಿಂದ ಚಾಮುಂಡಿಮೂಲೆ ತನಕ ಹೊಂಡ- ಗುಂಡಿಯಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲದ ನೇತೃತ್ವದಲ್ಲಿ ಹೊಂಡ ಮುಚ್ಚುವ ಕಾರ್ಯ ಜು.30 ರಂದು ನಡೆಯಿತು.

ಜಲ್ಲಿ, ಜಲ್ಲಿಹುಡಿ ಬಳಸಿ ಬೃಹತ್ ಗಾತ್ರದ ಹೊಂಡಗಳನ್ನು ಮುಚ್ಚಲಾಯಿತು. ಈ ಸಂದರ್ಭದಲ್ಲಿ ನೇಸರ ಯುವಕ ಮಂಡಲದ ಸದಸ್ಯರಾದ ಪೂವಪ್ಪ ನಾಯ್ಕ ಕೊಂಡೆಪ್ಪಾಡಿ, ಜಯಂತ ಗೌಡ ಕುಂಡಡ್ಕ, ರವಿ ಕುಂಡಡ್ಕ, ರಮೇಶ್ ಕಾನಾವು, ವಾಸುದೇವ ಕುಂಡಡ್ಕ, ರಾಮಚಂದ್ರ ಚೆನ್ನಾವರ ಹಾಗೂ ಕುಂಡಡ್ಕ ಪರಿಸರದ ವಿದ್ಯಾರ್ಥಿಗಳು ಸಹಕರಿಸಿದರು.