ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದ ಮಹಾಸಭೆ

0

ನೂತನ ಪದಾಧಿಕಾರಿಗಳು:
ಅಧ್ಯಕ್ಷ -ಅವಿನ್ ಬೆಟ್ಟಂಪಾಡಿ, ಕಾರ್ಯದರ್ಶಿ -ಗೀತಾ ಬೆಟ್ಟಂಪಾಡಿ, ಖಜಾಂಜಿ- ವಿಶ್ವನಾಥ ಪಡ್ಡಂಬೈಲು

ಸುಳ್ಯ ಕಸಬಾದ ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಮಹಾಸಭೆಯು ಸಂಘದ ಅಧ್ಯಕ್ಷ ನಾರಾಯಣ ರವರ ಅಧ್ಯಕ್ಷತೆಯಲ್ಲಿ ಭಜನಾ ಮಂದಿರದ ವಠಾರದಲ್ಲಿ ಜು.23 ರಂದು ನಡೆಯಿತು.


ಈ ಸಂದರ್ಭದಲ್ಲಿ ಸಂಘದ
ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಲಾಯಿತು.
2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಅವಿನ್ ಬೆಟ್ಟಂಪಾಡಿ, ಕಾರ್ಯದರ್ಶಿ ಗೀತಾ ಬೆಟ್ಟಂಪಾಡಿ, ಖಜಾಂಜಿ ವಿಶ್ವನಾಥ ಪಡ್ಡಂಬೈಲು, ಉಪಾಧ್ಯಕ್ಷ ಸಂಜೀವ, ಜತೆ ಕಾರ್ಯದರ್ಶಿ ಸುರೇಶ್ ವಿ.ಆರ್, ಸದಸ್ಯರಾಗಿ ಆನಂದ ಬೆಟ್ಟಂಪಾಡಿ, ಎ.ಆರ್ ವಿಠಲ, ಕೆ.ಪಿ.ಗೋಪಾಲ, ನಾರಾಯಣ, ಶ್ರೀಮತಿ ಉಮಾವತಿ ನಾರಾಯಣ, ಶ್ರೀಮತಿ ತುಳಸಿ ರವರನ್ನು ಆಯ್ಕೆ ಮಾಡಲಾಯಿತು.