ಉತ್ತಮ ವ್ಯಕ್ತಿತ್ವದ, ಹಿರಿಯ, ಪ್ರಾಮಾಣಿಕ ಶಿಕ್ಷಕನನ್ನು ಕಳೆದುಕೊಂಡಿದ್ದೇವೆ

0

ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಬಿ.ಕೆ.ಯವರ ವೈಕುಂಠ ಸಮಾರಾಧನೆ – ನುಡಿ ನಮನ

ಜು.23ರಂದು ನಿಧನರಾದ ಪೆರಾಜೆ ಅಮೆಚೂರು ಬೊಮ್ಮನಮನೆ ದಿ|ಗೋಪಾಲಕೃಷ್ಣ ಬಿ.ಕೆ. ಯವರ ವೈಕಯಂಠ ಸಮಾರಾಧನೆ ಮತ್ತು‌ ನುಡಿನಮನ ಕಾರ್ಯಕ್ರಮ ಇಂದು ಮೃತರ ಸ್ವಗೃಹದಲ್ಲಿ ನಡೆಯಿತು.

ಶಿಕ್ಷಕ ಮೋಹನ ಮಾಸ್ತರ್ ರವರು ದಿ| ಗೋಪಾಲಕೃಷ್ಣ ಬಿ.ಕೆ.ಯವರಿಗೆ ನುಡಿ ನಮನ ಸಲ್ಲಿಸಿ ಗೋಪಾಲಕೃಷ್ಣ ರವರು ಉತ್ತಮ ವ್ಯಕ್ತಿತ್ವ ಉಳ್ಳವರಾಗಿದ್ದರು. ಯಾರಿಗೂ ಯಾವುದೇ ನೋವು ಉಂಟು ಮಾಡದೇ ಬದುಕಿ ಸವೆಸಿದ ಅವರು ಸರಕಾರಿ ನಿಯಮಗಳನ್ನು ಚಾಚು ತಪ್ಪದೇ ನಿರ್ವಹಿಸಿ ಸಾರ್ಥಕ ಬದುಕು ಸವೆದಿದ್ದಾರೆ. 2 ಎಕ್ರೆ ಜಾಗವನ್ನು ಅಮೆಚೂರು ಶಾಲೆಗೆ ದಾನ ಮಾಡಿದಂತಹ ಹಿರಿಯ ಪ್ರಾಮಾಣಿಕ‌ ಶಿಕ್ಷಕನನ್ನು ಕಳೆದುಕೊಂಡಿದ್ದೇವೆ ಎಂದರು.

ಬಳಿಕ ಸೇರಿದ ಬಂಧುಮಿತ್ರರೆಲ್ಲರೂ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ, ದಿ|ಗೋಪಾಲಕೃಷ್ಣರ ಪತ್ನಿ, ಮಕ್ಕಳು, ಸಹೋದರರು ಸೇರಿದಂತೆ ನೂರಾರು ಬಂಧುಮಿತ್ರರು ಮೃತರ ಭಾವಚಿತ್ರ ಕ್ಕೆ ಪುಷ್ಪನಮನ ಸಲ್ಲಿಸಿದರು.