ಮರ್ಕಂಜ: ವಿಪತ್ತು ನಿರ್ವಹಣಾ ತಂಡದಿಂದ ಮರ ತೆಗೆಯುವ ಕಾರ್ಯ

0

ಮರ್ಕಂಜ ಗ್ರಾಮದ ಪನ್ನೆ ಬೈಲು ಹಾಗೂ ತೋಟಚಾವಡಿಯ ಮದ್ಯೆ ಹೊಳೆಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟಿನ ಕಾಮಗಾರಿ ಪೂರ್ಣವಾಗದೇ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಣೆಕಟ್ಟೆಗೆ ಅಡ್ಡಲಾಗಿ ಮರ ಕಾಡು ನಿಂತಿರುವುದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಅದಲ್ಲದೇ ಅಣೆಕಟ್ಟಿನ ಒಂದು ಭಾಗದ ಮಣ್ಣು ಕೊಚ್ಚಿಹೋಗಿರುತ್ತದೆ. ಅದನ್ನು ಹಾಗೆ ಬಿಟ್ಟರೆ ಅಪಾಯ ಹೆಚ್ಚಾಗುವ ಸಾಧ್ಯತೆಯಿದ್ದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರಾದ ವೆಂಕಟ್ರಮಣ ಕಂದಡ್ಕ ಹಾಗೂ ಅವರ ತಂಡದ ಸದಸ್ಯರು ಜು.30ರಂದು ಅಣೆಕಟ್ಟುವಿನಲ್ಲಿ ಸಿಲುಕಿದ್ದ ಮರಗಳನ್ನು ತೆಗೆಯುವ ಕಾರ್ಯ ಮಾಡಿದ್ದಾರೆ. ಊರಿನ ಯುವಕರಾದ ಪ್ರಶಾಂತ್ ರೈ ಪಾರೆಪ್ಪಾಡಿ ಮತ್ತು ವೆಂಕಟ್ರಮಣ ಗೌಡ ಕನಕಮಜಲು ಹಾಗೂ ಗ್ರಾ.ಪಂ. ಉಪಾಧ್ಯಕ್ಷ ಗೋವಿಂದ ಅಳವುಪಾರೆ ಸಹಕರಿಸಿದರು.