ಬಡ್ಡಡ್ಕ ಅಮರ ಕ್ರೀಡಾ ಕಲಾ ಸಂಘದ ವತಿಯಿಂದ ಆಟಿದ ಗಮ್ಮತ್ತ್ – ವಿವಿಧ ಸ್ಪರ್ಧೆಗಳು

0

ಆಲೆಟ್ಟಿಯ ಬಡ್ಡಡ್ಕ ಅಮರ ಕ್ರೀಡಾ ಕಲಾ ಸಂಘದ ವತಿಯಿಂದ ಆಟಿದ ಗಮ್ಮತ್ತ್ ಕಾರ್ಯಕ್ರಮ ಜು.30 ರಂದು ಗಬ್ಬಲ್ಕಜೆ ಕಾವೇರಿ ಕಲಾ ಮಂದಿರದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ವೆಂಕಟ್ರಮಣ ದೋಣಿಮೂಲೆ ದೀಪ ಪ್ರಜ್ವಲಿಸಿದರು‌.
ಮುಖ್ಯ ಅತಿಥಿಗಳಾಗಿ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಗಿರಿಯಪ್ಪ ನಾಯ್ಕ್ ಆಟಿ ಮಹತ್ವದ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ
ಗೌರವಾಧ್ಯಕ್ಷ ಡಾ.ಎನ್.ಎ ಜಯದೀಪ್, ಶಾಂತರಾಮ ಭಟ್ ಶಾಂತಮಂಗಲ, ದೇವಿ ಪ್ರಸಾದ್ ಬಡ್ಡಡ್ಕ, ಗಂಗಾಧರ ಬಡ್ಡಡ್ಕ ಉಪಸ್ಥಿತರಿದ್ದರು.


ಅನಿಲ್ ಬಡ್ಡಡ್ಕ ಪ್ರಾರ್ಥಿಸಿದರು. ಕಾರ್ಯದರ್ಶಿ ರಂಜಿತ್ ಬಡ್ಡಡ್ಕ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಅಭಿಜಿತ್ ವಂದಿಸಿದರು. ಸನತ್ ಕುಮಾರ್ ಚಳ್ಳಂಗಾರ್ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ಗಳನ್ನುಏರ್ಪಡಿಸಲಾಗಿತ್ತು. ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸದಸ್ಯರು ಆಟಿ ವಿಶೇಷ ಖಾದ್ಯಗಳನ್ನು ತಯಾರಿಸಿದರು. ಮಧ್ಯಾಹ್ನ ಎಲ್ಲರಿಗೂ ಸಹಭೋಜನದ ವ್ಯವಸ್ಥೆ ಮಾಡಲಾಗಿತ್ತು.