ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲದಿಂದ ಆಟಿ ಉತ್ಸವ – ಶಾಸಕಿ‌ ಭಾಗೀರಥಿ ಮುರುಳ್ಯ ರಿಗೆ ಸನ್ಮಾನ

0

ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲ ಅಜ್ಜಾವರ ಇದರ ವತಿಯಿಂದ ಆಟಿ ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮವು ಆ.3 ರಂದು ಶ್ರೀ ಶಂಕರ ಭಾರತಿ ವೇದಪಾಠ ಶಾಲೆ ಅಜ್ಜಾವರದಲ್ಲಿ ನಡೆಯಿತು.
ಶಾಸಕಿ ಕು. ಭಾಗೀರಥಿ ಮುರುಳ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.


ಅಧ್ಯಕ್ಷತೆ ಯನ್ನು ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷರಾದ ನಳಿನಾಕ್ಷಿ ಪ್ರಸಾದ್ ಅಡ್ಪಂಗಾಯ ರವರು ವಹಿಸಿದ್ದರು. ವರಮಹಾಲಕ್ಷ್ಮಿ ಪೂಜಾ ಸಮಿತಿ ಯ ಅಧ್ಯಕ್ಷೆ ಮನೋರಮ ಪಡ್ಡ oಬೈಲು ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿ ಯಾಗಿ ಶ್ರೀದೇವಿ ನಾಗರಾಜ್ ಭಟ್ ಕೇಶವ ಕೃಪಾ ಸುಳ್ಯ, ಧನಲಕ್ಷ್ಮೀ ಮಹಿಳಾ ಮಂಡಲದ ಗೌರವಧ್ಯಕ್ಷೆ ಶಶ್ಮಿ ಭಟ್ ಮತ್ತು ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕರಾದ ವಿಶಾಲ ಮತ್ತು ಮಹೇಶ್ ಶೆಟ್ಟಿ ಮೇನಾಲ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಬಹುಮಾನ ಪ್ರಾಯೋಜಕರಾಗಿ ಸತ್ಯವತಿ ಬಸವನಪಾದೆ ಗ್ರಾಮ ಪಂಚಾಯತ್ ಅಧ್ಯಕ್ಷರು ನೀಡಿದರು. ಕಾರ್ಯಕ್ರಮದಲ್ಲಿ ಆಟಿ ತಿಂಗಳ ಹಲವಾರು ತಿಂಡಿ ತಿನಿಸುಗಳನ್ನು ತಾವೇ ಮನೆಯಲ್ಲಿ ತಯಾರಿಸಿ ಎಲ್ಲರಿಗೂ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ದರು. ಕು. ಹರ್ಷಿತಾ ಪ್ರಾರ್ಥಿಸಿದರು. ಸ್ವಿಶಾಲ ಸೀತಾರಾಮ ಕರ್ಲಪಾಡಿ ವಂದಿಸಿದರು. ವಿಮಲ ಅರುಣ ಪಡ್ಡ oಬೈಲು ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ನಾಗೇಶ್ ಬೇಲ್ಯ ಯರವರು ನೆರವೇರಿಸಿದರು ಶಾಂತಿಮಂತ್ರ ಹಾಡಿ ಕಾರ್ಯಕ್ರಮ ಕೊನೆಗೊಳಿಸಲಾಯಿತು