ಬಳ್ಪ : ಅಕ್ರಮ ಪ್ರವೇಶ – ಕೃಷಿ ಹಾನಿ

0
  • ಇತ್ತಂಡದಿಂದ ದೂರು – ಪೋಲೀಸ್ ಕೇಸು

ಬಳ್ಪ ಗ್ರಾಮದ ಕೊಠರಿ ಎಂಬಲ್ಲಿ ಎರಡು ಮನೆಯವರ ಮಧ್ಯೆ ತಕರಾರೆದ್ದು , ಎರಡು ಮನೆಯವರೂ ಪರಸ್ಪರ ದೋಷಾರೋಪ ಮಾಡಿಕೊಂಡು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಲೀಸರು ಇತ್ತಂಡದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಪಿರ್ಯಾದಿದಾರರಾದ ಕಡಬ ಬಳ್ಪ ಗ್ರಾಮದ ನಿವಾಸಿ ಚಂದ್ರಯ್ಯ ಆಚಾರ್ಯ (55) ಎಂಬವರ ದೂರಿನಂತೆ ‘ ಪಿರ್ಯಾದಿದಾರರಿಗೆ ಬಳ್ಪ ಗ್ರಾಮದಲ್ಲಿ ಕೃಷಿ ಜಾಗವಿದ್ದು, ಅದರಲ್ಲಿ ಕೃಷಿಯನ್ನು ಹೊಂದಿರುತ್ತಾರೆ.

ಈ ಕೃಷಿ ಜಾಗಕ್ಕೆ ಭರತ್ ಗೌಡ ಕೊಠಾರಿ ಮನೆ ಹಾಗೂ ಅವರ ಪತ್ನಿ ಶ್ರೀಮತಿ ಜಯಶ್ರೀಯವರು ಆಗಸ್ಟ್ 8 ರಂದು ಮಧ್ಯಾಹ್ನ ಅಕ್ರಮ ಪ್ರವೇಶ ಮಾಡಿ 3 ಅಡಿಕೆ ಗಿಡಗಳನ್ನು ಕಿತ್ತು ಬಿಸಾಡಿ ಕೃಷಿಯನ್ನು ಹಾನಿ ಮಾಡಿ, ಜೀವ ಬೆದರಿಕೆ ಹಾಕಿರುತ್ತಾರೆ ‘ ಎಂದು ದೂರು ನೀಡಿದ್ದಾರೆ.

ಸದರಿ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 57/2023 ಕಲಂ:447,427,506 ಜೊತೆಗೆ 34 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಕೌಂಟರ್ ಕೇಸು
ಕೊಠಾರಿ ಮನೆ ಭರತ್ ಗೌಡರವರು ನೀಡಿದ ದೂರಿನಂತೆ ಚಂದ್ರಯ್ಯ ಆಚಾರಿ, ಮತ್ತು ಅವರ ಇಬ್ಬರು ಮಕ್ಕಳು, ಬಾಲಕೃಷ್ಣ ಆಚಾರಿ ಎಂಬುವರುಗಳು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಾನಸಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ : 58/2023 ಕಲಂ:447, 506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.