ಕುಕ್ಕುಜಡ್ಕ ವಿಷ್ಣು ಅಟೋ ಚಾಲಕ ಮಾಲಕರ ಸಂಘದಮಹಾಸಭೆ

0


ಪದಾಧಿಕಾರಿಗಳು:ಅಧ್ಯಕ್ಷ-ಸತೀಶ್ ಪಿಲಿಕಜೆ, ಕಾರ್ಯದರ್ಶಿ-ಪುನೀತ್ ಸಂಕೇಸ

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ
ಶ್ರೀ ಮಹಾವಿಷ್ಣು ಅಟೋ ಚಾಲಕ ಮಾಲಕರ ಸಂಘದಮಹಾಸಭೆಯು ಆ.9 ರಂದು ಕುಕ್ಕುಜಡ್ಕ ಘಟಕದ ಅಧ್ಯಕ್ಷ ಶಿವರಾಜ್ ಪದವು ರವರ ಅಧ್ಯಕ್ಷತೆಯಲ್ಲಿ ಅಮರಮುಡ್ನೂರು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ,
ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮರ್ಕಂಜ ಉಪಸ್ಥಿತರಿದ್ದರು.
ಮುಂದಿನ 2023-2024ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಸತೀಶ್ ಪಿಲಿಕಜೆ, ಕಾರ್ಯದರ್ಶಿಯಾಗಿ ಪುನೀತ್ ಸಂಕೇಸ , ಸಂಘಟನಾ ಕಾರ್ಯದರ್ಶಿ ದಿನೇಶ್ ಕುಕ್ಕುಜಡ್ಕ, ನಿರ್ದೇಶಕ ಹರೀಶ್ ಕೊರತ್ಯಡ್ಕ ರವರನ್ನು ಆಯ್ಕೆ ಮಾಡಲಾಯಿತು. ವಸಂತ್ ಚೊಕ್ಕಾಡಿ ಕಾರ್ಯಕ್ರಮ ಅವರು ನಿರೂಪಿಸಿದರು.
ಅಟೋ ಚಾಲಕ ಮಾಲಕರ ಸಂಘದ ಸದಸ್ಯರು ಭಾಗವಹಿಸಿದರು.