ವಿಶ್ವ ಹಿಂದೂ ಪರಿಷದ್, ಭಜರಂಗದಳ ಆಯೋದ್ಯೆ ಶಾಖೆ ಎಲಿಮಲೆ ವತಿಯಿಂದ ಪಂಜಿನ‌ ಮೆರವಣಿಗೆ

0

ವಿಶ್ವ ಹಿಂದೂ ಪರಿಷದ್, ಭಜರಂಗದಳ ಆಯೋದ್ಯೆ ಶಾಖೆ ಎಲಿಮಲೆ ವತಿಯಿಂದ ಪಂಜಿನ‌ ಮೆರವಣಿಗೆಯು ಆ.13ರಂದು ಎಲಿಮಲೆ ಮೇಲಿನ ಪೇಟೆಯಿಂದ ಕೆಳಗಿನ ಪೇಟೆಯವರೆಗೆ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಂದ್ರಶೇಖರ ಭಟ್ ಹಾಗೂ ಉಪನ್ಯಾಸಕರಾದ ಪದ್ಮಕುಮಾರ್ ಕುಂಡಡ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು.


ವೇದಿಕೆಯಲ್ಲಿ ತಾಲೂಕು ಸಂಯೋಜಕರಾದ ಹರಿಪ್ರಸಾದ್ ಎಲಿಮಲೆ, ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲ್ತಡ್ಕ, ಅಯೋಧ್ಯೆ ಶಾಖೆ‌ ಎಲಿಮಲೆ ಇದರ‌ ಅಧ್ಯಕ್ಷರಾದ ಬೋಜಪ್ಪ ಹರ್ಲಡ್ಕ, ಪ್ರಶಾಂತ್ ಅಂಬೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಎ.ವಿ.ತೀರ್ಥರಾಮ, ಹರೀಶ್ ಕಂಜಿಪಿಲಿ, ಕೃಷ್ಣಯ್ಯ ಮೂಲೆತೋಟ, ಈಶ್ವರಪ್ಪ ಹರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ದೀಕ್ಷಿತ್ ಚಿತ್ತಡ್ಕ‌ ಸ್ವಾಗತಿಸಿ, ಉದಯ‌ ಚಳ್ಳ ವಂದಿಸಿದರು. ಕಿರಣ್ ಗುಡ್ಡೆಮನೆ ಕಾರ್ಯಕ್ರಮ ನಿರೂಪಿಸಿದರು.