ಬೆಳ್ಳಾರೆ : ಐತಿಹಾಸಿಕ ಸ್ಥಳ ಬಂಗ್ಲೆ ಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಬೆಳ್ಳಾರೆ ಗ್ರಾಮದ ಸ್ವಾತಂತ್ರ್ಯ ಸಂಗ್ರಾಮ ಸಾರಿದ ಐತಿಹಾಸಿಕ ಸ್ಥಳ ಬಂಗ್ಲೆ ಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಆ.15 ರಂದು ನಡೆಯಿತು.ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಧ್ವಜಾರೋಹಣ ನೆರವೇರಿಸಿದರು.ಮುಖ್ಯ ಭಾಷಣಕಾರರಾಗಿ ಜಯರಾಮ ಬೊಳ್ಳಾಜೆ, ಪರ್ಯವರಣ ಸಂರಕ್ಷಣಾ ಗತಿ ವಿಧಿಯ ರಾಜ್ಯ ಸಂಯೋಜಕರು ಬೆಂಗಳೂರು ಇವರು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ನಿಯೋಜಿತ ಅಧ್ಯಕ್ಷೆ ಶ್ರೀಮತಿ ನಮಿತಾ ರೈ ,ನಿಯೋಜಿತ ಗ್ರಾಮ ಪಂಚಾಯತ್ ಉಪಧ್ಯಾಕ್ಷರಾದ ಶ್ರೀಮತಿ ವೀಣಾ, ಗ್ರಾಮ ಪಂಚಾಯತ್ ಸದಸ್ಯರು, ಬೆಳ್ಳಾರೆ ಕೆಪಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ಬಾಳಿಲ,ಮತ್ತು ಸದಸ್ಯರು,

ಮುಖ್ಯ ಗುರುಗಳು, ಪ್ರಾಂಶುಪಾಲರು, ಶಿಕ್ಷಕ ವೃಂದ ,ವಿದ್ಯಾರ್ಥಿ ವೃಂದ, ಗ್ರಾಮ ಪಂಚಾಯತ್ ಸಿಬಂದಿಗಳು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ತಿರುಮಲೇಶ್ವರ ಸ್ವಾಗತಿಸಿ, ಸಂಜಯ್ ನೆಟ್ಟಾರು ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಗ್ರಾಮ ಪಂಚಾಯತ್ ವತಿಯಿಂದ “ಕೋಟಿ ವೃಕ್ಷ ಅಭಿಯಾನ” ಹಾಗೂ ಮೇರಿ ಮಿಟ್ಟಿ ಮೇರಾ ದೇಶ್ ಚಟುವಟಿಕೆಯಡಿ ಗಿಡನೆಡುವ ಕಾರ್ಯಕ್ರಮ ನಡೆಯಿತು.