ಗುತ್ತಿಗಾರು: ಹಿಂದೂ ಜಾಗರಣ ವೇದಿಕೆ ವತಿಯಿಂದ ಪಂಜಿನ‌ ಮೆರವಣಿಗೆ

0

ಹಿಂದೂ ಜಾಗರಣಾ ವೇದಿಕೆ ಗುತ್ತಿಗಾರು ವತಿಯಿಂದ 76 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಖಂಡ ಭಾರತ ಸಂಕಲ್ಪ ದಿನವಾಗಿ ಪಂಜಿನ‌ ಮೆರವಣಿಗೆ ಆ.14 ರಂದು ನಡೆಯಿತು.

ಗುತ್ತಿಗಾರಿನ ಬಾಕಿಲದಿಂದ ಹೊರಟು ಮುತ್ತಪ್ಪನಗರದ ವರೆಗೆ ನಡೆಯಿತು. ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರವಿಕುಮಾರ್ ಬಳ್ಳಡ್ಕ ಪಂಜಿನ ಮೆರವಣಿಗೆ ಚಾಲನೆ ನೀಡಿದರು. ಬಳಿಕ ಮುತ್ತಪ್ಪ ನಗರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಹಿಂದು ಜಾಗರಣ ವೇದಿಕೆಯ ಮಾಜಿ ಸಂಚಾಲಕ ಸತೀಶ್ ಗುಂಡನ ಮನೆ ವಹಿಸಿದ್ದರು. ಸರಸ್ವತಿ ವಿದ್ಯಾಮಂದಿರ ಪುರುಷರ ಕಟ್ಟೆ ಇದರ ಸಂಚಾಲಕರಾದ ಅವಿನಾಶ್ ಕೊಡೆಂಕೀರಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಮಾತೃ ಸುರಕ್ಷಾ ಪ್ರಮುಖ್ ಅವಿನಾಶ್ ಪುರುಷರ ಕಟ್ಟೆ ದಿಕ್ಸೂಚಿ ಭಾಷಣ ಮಾಡಿದರು. ವೇಣುಕುಮಾರ್ ಚಿತ್ತಡ್ಕ ಪ್ರಾರ್ಥಿಸಿದರು. ಸಚಿನ್ ಮೊಟ್ಟೆ ಮನೆ ಸ್ವಾಗತಿಸಿ, ಸತೀಶ್ ಮೂಕಮಲೆ ವಂದಿಸಿದರು. ಕಿಶೋರ್ ಕುಮಾರ್ ಪೈಕ ಬೊಮ್ಮದೆರೆ ಕಾರ್ಯಕ್ರಮ ನಿರೂಪಿಸಿದರು.