ರಿಲಯನ್ಸ್ ಟವರ್ ನಿರ್ಮಾಣಕ್ಕೆ ಹಣ ಪಡೆದು ಮೋಸ : ಪೊಲೀಸ್ ದೂರು

0

ರಿಲಯನ್ಸ್ ಟವರ್ ನಿರ್ಮಾಣಕ್ಕೆ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಪಂಜದ ಐವತ್ತೊಕ್ಲು ಗ್ರಾಮದ ನಾರಾಯಣ ಎನ್. ಎಂಬವರು ಸುಬ್ರಹ್ಮಣ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

” ರಿಲಯನ್ಸ್ ಕಂಪನಿಯವರೆಂದು ಪರಿಚಯಿಸಿಕೊಂಡು ಪೋನ್ ಕರೆ ಮಾಡಿದ ಅಪರಿಚಿತರು ಟವರ್ ನಿರ್ಮಾಣಕ್ಕೆ ನನ್ನ ಸ್ವಂತ ಜಾಗದಲ್ಲಿ ಸ್ಥಳಾವಕಾಶವನ್ನು ಕೋರಿ, ಕೆಲವು ದಾಖಲೆಯನ್ನು ಮೊಬೈಲ್ ವಾಟ್ಸ್ ಪ್ ಮುಖಾಂತರ ಹಾಗೂ 12-08-2023 ರಿಂದ 14-08-2023 ಅವಧಿಯಲ್ಲಿ ಒಟ್ಟು 52,000 ರೂಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.