ಅಕ್ರಮ ದನ ಸಾಗಾಟ : ಕುಲ್ಕುಂದದಲ್ಲಿ ಪೊಲೀಸ್ ವಶ

0


ಗುತ್ತಿಗಾರು ಕಡೆಯಿಂದ ಶನಿವಾರಸಂತೆಗೆ ಕೃಷಿ ಉದ್ಧೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನ ಮತ್ತು ಒಂದು ಕರುವನ್ನು ಸುಬ್ರಹ್ಮಣ್ಯ ಪೊಲೀಸರು ನಿನ್ನೆ ಮಧ್ಯಾಹ್ನ 2.3೦ಕ್ಕೆ (ಆ.17 ರಂದು ) ವಶಪಡಿಸಿಕೊಂಡಿದ್ದಾರೆ.


ಸುಳ್ಯ ತಾಲೂಕಿನಿಂದ ಹಾಸನ ಕಡೆಗೆ ವೈದ್ಯರುಗಳ ದೃಢೀಕರಣ ಪತ್ರ ಇಲ್ಲದೆಜಾನುವಾರುಗಳಸಾಗಾಟ ನಡೆಯುತ್ತಿರುವ ಬಗ್ಗೆ ಪಶುವೈದ್ಯಾಧಿಕಾರಿಗಳು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ನಿನ್ನೆ ಮಧ್ಯಾಹ್ನ ಪೊಲೀಸರು ಕುಲ್ಕುಂದದಲ್ಲಿ ತಪಸಣಾ ಕಾರ್ಯ ನಿರತರಾಗಿದ್ದರು.

ಆ ವೇಳೆ ಟಾಟ ಏಸ್ ವಾಹನದಲ್ಲಿ ಶನಿವಾರಸಂತೆ ಕಡೆಗೆ ಸಾಗಿಸಲೆಂದು ಕೊಂಡೊಯ್ಯುತ್ತಿದ್ದ ದನ ಸಾಗಾಟದ ವಾಹನವನ್ನು ನಿಲ್ಲಿಸಿ ಪರಿಶೀಲಿಸುವಾಗ ಅವರಲ್ಲಿ ವೈದ್ಯರ ಪ್ರಮಾಣ ಪತ್ರ ಇರಲಿಲ್ಲ. ಆ ಹಿನ್ನಲೆಯಲ್ಲಿ ಪೊಲೀಸರು ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದರು. ವಾಹನದಲ್ಲಿ ಮೂವರು ಇದ್ದರೆನ್ನಲಾಗಿದ್ದ ಅವರನ್ನು ವಶಕ್ಕೆ ಪಡೆಯಬೇಕಾಗಿದೆ ಎಂದು ತಿಳಿದುಬಂದಿದೆ.