ಗೋವಿನ ಶವ ಸಂಸ್ಕಾರ ಪೂರೈಸಿ ಮಾನವೀಯತೆ ಮೆರೆದ ಸುಬ್ರಹ್ಮಣ್ಯ ಪೊಲೀಸರು

0


ಸಾವನಪ್ಪಿದ ಗೋವೊಂದನ್ನು ಸುಬ್ರಹ್ಮಣ್ಯ ಪೊಲೀಸರು ಶವ ಸಂಸ್ಕಾರ ಪೂರೈಸಿ ಗುಂಡಿ ತೋಡಿ ಹೂಳಿ ಮಾನವೀಯತೆ ಮೆರೆದ ಘಟನೆ ಆ.೧೮ ರಂದು ಸುಬ್ರಹ್ಮಣ್ಯ ದಿಂದ ವರದಿಯಾಗಿದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಿಂಬದಿ ಸಾವನಪ್ಪಿದ ಗೋವೊಂದನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಜೇಸಿಬಿ ಯಂತ್ರದ ಸಹಾಯದಿಂದ ಹೊಂಡವನ್ನು ತೋಡಿ ಹೂಳಲಾಯಿತು. ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಸಿಬಂದಿಗಳು ಹಾಗೂ ಸ್ಥಳೀಯರ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನದ ಮೂಲಕ ಹೊಂಡ ತೋಡಿ ಹೂಳಲಾಯಿತು ಎಂದು ತಿಳಿದು ಬಂದಿದೆ.