ಟಿ. ನಾರಾಯಣ ಭಟ್ ರಾಮಕುಂಜರವರ “ಬೆಳಕು ಬೆಳದಿಂಗಳು” ಕೃತಿ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರಿಂದ ಬಿಡುಗಡೆ

0

ಟಿ. ನಾರಾಯಣ ಭಟ್ ರಾಮಕುಂಜ ಅವರ “ಬೆಳಕು ಬೆಳದಿಂಗಳು” ಕೃತಿಯನ್ನು ಶ್ರೀಗಳಾದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರು ಆ.೧೮ ರಂದು ಬಿಡುಗಡೆ ಮಾಡಿದರು.

ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣ ತಜ್ಞರು,ಉತ್ತಮ ಲೇಖಕರು ಆಗಿರುವ ಟಿ. ನಾರಾಯಣ ಭಟ್ ರಾಮ ಕುಂಜ ಇವರು, ಶಿಕ್ಷಣಕ್ಕೆ ಸಂಬಂಧಿಸಿ ಬರೆದ ಅನೇಕ ಪುಸ್ತಕಗಳು ಹಲವು ಬಾರಿ ಮರು ಮುದ್ರಣ ಹೊಂದುವಷ್ಟು ಆಕರ್ಷಕವಾಗಿದೆ. ಇತ್ತೀಚೆಗೆ ಅವರ ಒಡನಾಡಿಗಳ ವ್ಯಕ್ತಿ ಪರಿಚಯ ಲೇಖನ ಸಂಗ್ರಹ ಬೆಳಕು ಬೆಳದಿಂಗಳು ತುಂಬಾ ಅರ್ಥಪೂರ್ಣವಾಗಿದೆ ಎಂದು ಸುಬ್ರಹ್ಮಣ್ಯದ ಸಮಾರಂಭ ಒಂದರಲ್ಲಿ ಕೃತಿ ಬಿಡುಗಡೆ ಮಾಡುತ್ತಾ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ನುಡಿದರು.

ನಮ್ಮ ನಾಡಿನ ಬಹಳಷ್ಟು ಮಂದಿ ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿದ್ದಾರೆ. ಅವರು ಎಲ್ಲೂ ಹೇಳುತ್ತಾ ಪ್ರಚಾರಗಿಟ್ಟಿಸಿಕೊಂಡವರಲ್ಲ. ಈ ಪರಿಚಯ ಲೇಖನ ಅವರಿಗಷ್ಟೇ ಆನಂದ ಕೊಡುವುದಲ್ಲ ಅವರ ಬದುಕಿನಿಂದ ಕಿರಿಯರು ಪ್ರೇರಣೆಗೊಂಡು ಮಹತ್ತರ ಸಾಧನೆಗೆ ಸ್ಫೂರ್ತಿ ಪಡೆಯುವರು. ಸ್ವಾತಂತ್ರ್ಯ ಪಡೆದು ೭೫ ವರ್ಷಗಳಾಗುವಷ್ಟರಲ್ಲಿ ಆ ಕಾಲದಲ್ಲಿದ್ದ ೪೭ ಮಹನೀಯರ ಸಾಧನೆ ಬಿಂಬಿಸುವ ಈ ಲೇಖನಗಳ ಮಾಲೆಯನ್ನು ಅತ್ಯಾಕರ್ಷವಾಗಿ ಬರೆದಿರುವರು ನಮ್ಮ ಆಪ್ತರಾದ ಟಿ. ನಾರಾಯಣ ಭಟ್. ಇವುಗಳನ್ನು ಸಂಗ್ರಹಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಅವರ ಅದಮ್ಯ ಉತ್ಸಾಹ ಇದನ್ನು ಬರೆಸಿತು ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಯುವ ಉದ್ಯಮಿ ಶಿವಪ್ರಸಾದ್ ಇಜ್ಜಾವು, ಸುಬ್ರಹ್ಮಣ್ಯ ಮಠದ ದಿವಾನರಾದ ಸುದರ್ಶನ ಜೋಯಿಸ್, ಸುಬ್ರಹ್ಮಣ್ಯ, ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಕೃಷ್ಣ ಶರ್ಮಾ, ಶಶಾಂಕ್ ಡಿ ಎಚ್, ಪತ್ರಕರ್ತ ಲೋಕೇಶ್ ಬಿ ಎನ್ ಉಪಸ್ಥಿತರಿದ್ದರು.