ಯೋಗ ರತ್ನ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಗೌರಿತಾ ಕೆ. ಜಿ. ಆಯ್ಕೆ

0

ಬೆಂಗಳೂರಿನ ಆತ್ಮ ಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಕೊಡಮಾಡುವ ” ಯೋಗ ರತ್ನ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ” ಗೌರಿತಾ ಕೆ. ಜಿ. ಆಯ್ಕೆಯಾಗಿದ್ದಾಳೆ.

ಆಗಸ್ಟ್ 27ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನ ನಯನ ಸಭಾಂಗಣ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸ್ವಾಮೀಜಿ ಗಳು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರದ ಬಹುಮುಖ್ಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಗೌರಿತಾ ಕೆ.ಜಿ .ಕುಮಾರಸ್ವಾಮಿ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಡಾ. ಗೌತಮ್ ಮತ್ತು ಡಾ.ರಾಜೇಶ್ವರಿ ದಂಪತಿಯ ಪುತ್ರಿ