ಸುಳ್ಯ ತಾಲೂಕು ಲ್ಯಾಂಪ್ಸ್ ಸಹಕಾರ ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸ.ಬ್ಯಾಂಕ್ ನಿಂದ ಪ್ರೋತ್ಸಾಹ ಪ್ರಶಸ್ತಿ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಂದ 2022- 23ನೇ ಸಾಲಿನಲ್ಲಿ ಮಹಾಸಭೆಯಲ್ಲಿ ಸುಳ್ಯ ಲ್ಯಾಂಪ್ ಸಹಕಾರಿ ಸಂಘದ ವಿಶೇಷ ಪ್ರಗತಿಯನ್ನು ಪರಿಗಣಿಸಿ ಸತತ ಎರಡನೇ ಬಾರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪ್ರೋತ್ಸಾಹ ಪ್ರಶಸ್ತಿ ನೀಡಿ ಗೌರವಿಸಿದರು.

ಲ್ಯಾಂಪ್ ಸಹಕಾರಿ ಸಂಘದ ಅಧ್ಯಕ್ಷರಾದ ಸೀತಾನಂದ ಬೇರ್ಪಡ್ಕ, ಮುಖ್ಯ ಕಾರ್ಯನಿರ್ವನಾಧಿಕಾರಿ ಚಂದ್ರಶೇಖರ ಡಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಮಾಧವ ಸುಬ್ರಹ್ಮಣ್ಯ ಮತ್ತು ಸುಬ್ಬಣ್ಣ ನಾಯ್ಕ್ ಗುತ್ತಿಗಾರು ಉಪಸ್ಥಿತರಿದ್ದರು.