ಗಾಂಧಿನಗರ : ಆಲೆಟ್ಟಿ ಕ್ರಾಸ್ ರಸ್ತೆ ನಡುವೆ ಗುಂಡಿಯಲ್ಲಿ ಕೆಸದ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು

0

ಗಾಂಧಿನಗರ ಆಲೆಟ್ಟಿ ಕ್ರಾಸ್ ರಸ್ತೆಯ ನಡುವೆ ಹೊಂಡ ನಿರ್ಮಾಣವಾಗಿದ್ದು ಸ್ಥಳೀಯರು ಕೆಸದ ಗಿಡ ನೆಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲೇ ಪಕ್ಕದಲ್ಲಿ ಚರಂಡಿ ಸ್ಲ್ಯಾಬ್ ಮುರಿದುಬಿದ್ದು ತಿಂಗಳು ಕಳೆದರೂ ಸಂಬಂಧಿಸಿದ ಇಲಾಖೆಯವರು ಇತ್ತ ಗಮನ ಹರಿಸದೆ ಇರುವುದರಿಂದ ಬೇಸತ್ತು ಈ ರೀತಿ ಗಿಡಗಳನ್ನು ನೆಟ್ಟು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಮಾಣಿ ಮೈಸೂರು ಹೆದ್ದಾರಿ ಆಗಿರುವ ಹಿನ್ನೆಲೆಯಲ್ಲಿ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ನಿನ್ನೆ ರಾತ್ರಿ ಈ ಗುಂಡಿಗೆ ಎರಡು ದ್ವಿಚಕ್ರ ವಾಹನಗಳು ಬಿದ್ದಿರುವುದಾಗಿ ತಿಳಿದುಬಂದಿದೆ.