ಬೆಳ್ಳಾರೆ: ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ

0


ಸ್ನೇಹಿತರ ಕಲಾ ಸಂಘ ರಿ. ಬೆಳ್ಳಾರೆ ಇದರ ವತಿಯಿಂದ ನಡೆಯುವ 25ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ನಡೆಯುವ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಆ. 20ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ವಸಂತ ಉಲ್ಲಾಸ್, ಕಾರ್ಯದರ್ಶಿ ಆನಂದ ಉಮಿಕ್ಕಲ, ಕೋಶಾಧಿಕಾರಿ ಮಹಾಲಿಂಗ ಕುರುಂಬುಡೇಲು, ಜತೆ ಕಾರ್ಯದರ್ಶಿ ಶ್ರೀನಿವಾಸ ಕುರುಂಬುಡೇಲು, ನಿಕಟಪೂರ್ವಾಧ್ಯಕ್ಷ ಸಂಜಯ್ ನೆಟ್ಟಾರು, ಪೂರ್ವಾಧ್ಯಕ್ಷ ಕೊರಗಪ್ಪ ಕುರುಂಬುಡೇಲು, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರಾದ ನಾರಾಯಣ ಶೆಟ್ಟಿ ಅಜಪಿಲ, ಅರ್ಚಕರಾದ ಶಂಭಯ್ಯ ಭಟ್, ದೇವಸ್ಥಾನದ ಕಚೇರಿ ಮ್ಯಾನೇಜರ್ ಮಹೇಶ್ ಕಲ್ಲಪಣೆ ಉಪಸ್ಥಿತರಿದ್ದರು.