ಪಂಜ ಸೀಮೆಯ ದೇವಳದಲ್ಲಿ ನಾಗರ ಪಂಚಮಿ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ನಾಗ ಬನದ ಕಟ್ಟೆಯಲ್ಲಿ ನಾಗರ ಪಂಚಮಿ ಆ.21ರಂದು ಜರುಗಿತು. ಆ ಪ್ರಯುಕ್ತ ತಂಬಿಲ ಸೇವೆ,ನಾಗ ದೇವರಿಗೆ ಹಾಲು, ಸೀಯಾಳ, ತುಪ್ಪ, ಜೇನು ಮೊದಲಾದ
ಅಭಿಷೇಕಗಳು ನಡೆಯಿತು.

ವೈಧಿಕ ಕಾರ್ಯಗಳನ್ನು ಅರ್ಚಕ ರಾಮಚಂದ್ರ ಭಟ್ ರವರ ಹಿರಿತನದಲ್ಲಿ ಜರುಗಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರು , ಮಾಜಿ ಆಡಳಿತ ಅಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ , ಸೀಮೆಯ ಭಕ್ತರು ಉಪಸ್ಥಿತರಿದ್ದರು.