ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ವತಿಯಿಂದ 52 ನೇ ವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ, ವಿರಾಟ್ ಪ್ರೆಂಡ್ಸ್ ಬೆಳ್ಳಾರೆ ಇದರ ವತಿಯಿಂದ ಸೆ.19 ಮತ್ತು ಸೆ.20 ರಂದು ನಡೆಯುವ 52ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಆ.21 ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಶ್ರೀನಾಥ್ ರೈ ಬಾಳಿಲ, ಪೂರ್ವಾಧ್ಯಕ್ಷ ಮನೋಜ್ ಶೆಟ್ಟಿ, ಅಧ್ಯಕ್ಷ ಸಂತೋಷ್ ಮಣಿಯಾಣಿ ಬೀಡು ಬೆಳ್ಳಾರೆ, ಸಚಿನ್ ಪೂವಾಜೆ, ಸನತ್ ಕಲ್ಲೋಣಿ,ಮಂಜುನಾಥ ಹೆಗ್ಡೆ, ಉಪಾಧ್ಯಕ್ಷ ಧೀರಜ್ , ಹರ್ಷರಾಜ್ ಮತ್ತಿತರರು ಉಪಸ್ಥಿತರಿದ್ದರು.