ಪಿಲಿಕಜೆ ಧರ್ಮ ಶಾಸ್ತಾ ಭಜನಾ ಮಂದಿರದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ

0

ಅಮರಮುಡ್ನೂರಿನ
ಪಿಲಿಕಜೆ ಶ್ರೀ ಧರ್ಮ ಶಾಸ್ತಾ ಭಜನಾ ಮಂದಿರದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಕುಂಟಾರು ಕ್ಷೇತ್ರದ ರವೀಶ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ತಂಬಿಲ ಸೇವೆ ಮತ್ತು ವಿಶೇಷ ಪೂಜೆ ಹಾಗೂ ನಾಗನಿಗೆ ಕ್ಷೀರಾಭಿಷೇಕ ಮತ್ತು ಸೀಯಾಳಭಿಷೇಕವು ಇಂದು ಬೆಳಗ್ಗೆ ನಡೆಯಿತು.


ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.