ಕಾಯರ್ತೋಡಿ: ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಜತ್ತಪ್ಪ ಗೌಡ ಪೂಜಾರಿಕೋಡಿಗೆ ಸನ್ಮಾನ

0

ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಳಕ್ಕೆ ಸಂಬಂಧಿಸಿದ ಶ್ರೀ ನಾಗದೇವರ ಮೂಲಸ್ಥಾನದಲ್ಲಿ ಬ್ರಹ್ಮಶ್ರೀ ವೇ.ಮೂ. ದೇಲಂಪಾಡಿ ಗಣೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ನಾಗಬ್ರಹ್ಮ ಸಹಪರಿವಾರ ಪ್ರತಿಷ್ಠೆಯು ಆ.20ರಂದು ಜರುಗಿತು.


ರಾತ್ರಿ ನಡೆದ ಸಮಾರಂಭದಲ್ಲಿ ನಾಗನಕಟ್ಟೆ ನಿರ್ಮಾಣದಲ್ಲಿ ತೊಡಗಿದ ಜತ್ತಪ್ಪ ಗೌಡ ಪೂಜಾರಿಮನೆ ರವರನ್ನು ಹರಿರಾಯ ಕಾಮತ್ ರವರು ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ನೀಲಕಂಠ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಸದಸ್ಯರುಗಳಾದ ಡಿ.ಎಸ್. ಗಿರೀಶ್, ಕೃಷ್ಣ ಬೆಟ್ಟ, ಎನ್.ಆನಂದ, ನಾರಾಯಣ ಕಾಯರ್ತೋಡಿ, ಬಿ.ಕೆ. ಪರಮೇಶ್ವರ, ಶ್ರೀಮತಿ ನಮಿತ ಎ.ಕೆ., ಶ್ರೀಮತಿ ಅನಂತೇಶ್ವರಿ ಎಂ. ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.