ಚಂದ್ರಯಾನ -3 ಯಶಸ್ವಿಗೆ ಅಜ್ಜಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪ್ರಾರ್ಥನೆ

0

ಚಂದ್ರಯಾನ -3* ಯಶಸ್ವೀ ಲ್ಯಾಂಡಿಂಗ್ ಆಗುವಂತೆ,ಅದರ ಹಿಂದೆ ಶ್ರಮವಹಿಸಿದ ನಾಸಾದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಯಶಸ್ಸು ಕೋರುವಂತೆ ಅಜ್ಜಾವರ ಗ್ರಾಮದ ಮಹಿಷಮರ್ದಿನೀ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮಹಿಷಮರ್ದಿನೀ ದೇವಸ್ಥಾನ ಧರ್ಮದರ್ಶಿಗಳಾದ ಭಾಸ್ಕರ್ ರಾವ್ ಬಯಂಬು, ಆಡಳಿತ ಸಮಿತಿ ಸದಸ್ಯರುಗಳಾದ ಚನಿಯ ಕಲ್ತಡ್ಕ, ಬಾಲಚಂದ್ರ ಮುಡೂರು,ಕಿಟ್ಟಣ್ಣ ರೈ, ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಬಂಟ್ರಬೈಲು, ಚೈತ್ರ ಯುವತಿ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ಅಜ್ಜಾವರ ,ಹಾಗೂ ಯುವತಿ ಮಂಡಲದ ಪದಾಧಿಕಾರಿಗಳು, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಮನೋರಮ,ಶ್ವೇತಾ ಪುರುಷೋತ್ತಮ,ಪೂಜಾ ಸಮಿತಿ ಪದಾಧಿಕಾರಿಗಳು,ಮತ್ತು ಸಂಪತ್ ರೈ ಮೇನಾಲ, ಪ್ರಶಾಂತ್ ಕರ್ಲಪ್ಪಾಡಿ, ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಿದರು.