ಸುಳ್ಯ ಅಂಬಟೆಡ್ಕ ವೆಂಕಟರಮಣ ದೇವ ಮಂದಿರದಲ್ಲಿ ಚಂದ್ರಯಾನ-3 ರ ಯಶಸ್ವಿಗೆ ಪ್ರಾರ್ಥನೆ

0

ಭಾರತದ ಇಸ್ರೋ ಸಂಸ್ಥೆಯ ವತಿಯಿಂದ ಕೈಗೊಂಡಿರುವ ಮಹತ್ವದ ಬಾಹ್ಯಾಕಾಶ ಯೋಜನೆ ಚಂದ್ರಯಾನ -3 ರ ಯಶಸ್ಸಿಗೆ ಸುಳ್ಯ ಅಂಬಟೆಡ್ಕದ ಶ್ರೀ ವೆಂಕಟರಮಣ ದೇವ ಮಂದಿರದಲ್ಲಿ ಇಂದು ಪ್ರಾರ್ಥನೆ ಸಲ್ಲಿಸಲಾಯಿತು.

ದೇವ ಮಂದಿರದ ಪ್ರಧಾನ ಅರ್ಚಕ ಶ್ರೀಹರಿ ಭಟ್ ರವರು ಪ್ರಾರ್ಥಿಸಿ‌ ಪೂಜೆಯನ್ನು ನೆರವೇರಿಸಿದರು.

ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ. ಜ. ನಾಯಕ್, ಸದಸ್ಯರಾದ ಚೆನ್ನಕೇಶವ ಭಂಡಾರಿ, ಅನೂಪ್ ಪೈ, ಗೌತಮ್ ಭಟ್ ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.