ಸುಳ್ಯ ಅಖಿಲ ಭಾರತೀಯ ಅಧಿವಕ್ತ ಪರಿಷತ್ ವತಿಯಿಂದ ಚೆನ್ನಕೇಶವ ದೇವಸ್ಥಾನದಲ್ಲಿ ಚಂದ್ರಯಾನ- 3 ಯಶಸ್ವಿಗೆ ಪ್ರಾರ್ಥನೆ

0

ಸುಳ್ಯ ಅಖಿಲ ಭಾರತೀಯ ಅಧಿವಕ್ತ ಪರಿಷತ್ ವತಿಯಿಂದ ಚಂದ್ರಯಾನ -3 ಯಶಸ್ಸಿಗೆ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಅಧಿವಕ್ತ ಪರಿಷತ್ತಿನ ಸುಳ್ಯ ಘಟಕದ ಅಧ್ಯಕ್ಷ ಹರೀಶ್ ಬೂಡುಪನ್ನೆ, ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸಂದೀಪ್ ಮದುವೆಗದ್ದೆ, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಜಗದೀಶ್ ಡಿ ಪಿ, ಸುಳ್ಯ ವಕೀಲರ ಸಂಘದ ಕಾರ್ಯದರ್ಶಿ ನ್ಯಾಯವಾದಿ ವಿನಯ ಕುಮಾರ್ ಮುಳುಗಾಡು,ಅಧಿವಕ್ತ ಪರಿಷತ್ತಿನ ಸುಳ್ಯ ಘಟಕದ ಕಾರ್ಯದರ್ಶಿ ನ್ಯಾಯವಾದಿ ಕುಸುಮಾಧರ ಕೆ, ಉಪಾಧ್ಯಕ್ಷ ನ್ಯಾಯವಾದಿ ಶ್ರೀ ವಿಪುಲ್ ನಿರ್ಪಾಡಿ, ರೆವೆನ್ಯೂ ವಿಭಾಗದ ಪ್ರಮುಖ್ ನ್ಯಾಯವಾದಿ ರಂಜಿತ್ ಕುಕ್ಕೇಟಿ, ನ್ಯಾಯವಾದಿ ಶ್ಯಾಮ್ ಪಾನತ್ತಿಲ, ವಕೀಲರ ಸಂಘದ ಕ್ರೀಡಾ ಕಾರ್ಯದರ್ಶಿ ಸತೀಶ್ ಕುಂಭಕೋಡು ಉಪಸ್ಥಿತರಿದ್ದರು.