ಮಂಗಳೂರು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಪಡ್ಪು ವಾಸುದೇವ ಗೌಡ ಶ್ರದ್ಧಾಂಜಲಿ ಸಭೆ

0

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಸೇವೆಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕ, ಸಾಮಾಜಿಕ ಧುರೀಣ ವಾಸುದೇವ ಗೌಡ ಪಡ್ಪುರವರು ಆ.13ರಂದು ನಿಧನರಾಗಿದ್ದು,

ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಇಂದು ಪೈಲಾರ್ ಸಮೀಪದ ಪಡ್ಪು ಮನೆಯಲ್ಲಿ ನಡೆಯಿತು.

ಸಂಬಂಧಿ ಶಿವರಾಮ ಗೌಡ ಹೊದ್ದೆಟ್ಟಿ ಮೃತರ ಗುಣಗಾನ ಮಾಡಿ ಅವರು ಸಮಾಜಕ್ಕೆ ನೀಡಿದ ಕೊಡುಗೆ, ಗಳಿಸಿದ ಪ್ರೀತಿ, ವಿಶ್ವಾಸ ಹಾಗೂ ಕುಟುಂಬ ಹಾಗೂ ನೆಂಟರಿಷ್ಠರೊಂದಿಗಿನ ಬಾಂಧವ್ಯವನ್ನು,

ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಿ,ನುಡಿನಮನ ಸಲ್ಲಿಸಿದರು.
ಮೃತರ ಪತ್ನಿ ಶ್ರೀಮತಿ ಗುಣವತಿ ಪಡ್ಪು, ಪುತ್ರರಾದ ವಿಕ್ರಂ ಪಡ್ಪು,

ಚೇತನ್ ಪಡ್ಪು, ಸೊಸೆಯಂದಿರಾದ ಶ್ರೀಮತಿ ಸ್ನೇಹ, ಶ್ರೀಮತಿ ಚೈತ್ರ, ಮೊಮ್ಮಕ್ಕಳು, ಸಹೋದರರು, ಸಹೋದರಿಯರು,ಬಂಧು ಬಳಗದವರು, ನೆಂಟರಿಷ್ಟರು,

ಮಂಗಳೂರು ಗೌಡ ಸಂಘದ ಪದಾಧಿಕಾರಿಗಳು, ಸದಸ್ಯರು, ಮಿತ್ರರು ಉಪಸ್ಥಿತರಿದ್ದರು.