ನಾಳೆ ಮುರುಳ್ಯ ನಟ್ಟಿಹಿತ್ಲುವಿನಲ್ಲಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ

0

ಮುರುಳ್ಯ ಗ್ರಾಮದ ನಟ್ಟಿಹಿತ್ಲು ಎಂಬಲ್ಲಿ ದಿ ಉಕ್ಕಣ್ಣ ಗೌಡ ಮತ್ತು ದಿ.ಶ್ರೀಮತಿ ಪೂವಮ್ಮ ಇವರ ಸ್ಮರಣಾರ್ಥ ಪ್ರಯಾಣಿಕರ ಬಸ್ ತಂಗುದಾಣದ ಉದ್ಘಾಟನಾ ಸಮಾರಂಭವು ಆ.26 ರಂದು ನೆರವೇರಲಿದೆ.
ತಂಗುದಾಣವನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ. ಮುರುಳ್ಯ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ವನಿತಾ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಭಾಗವಹಿಸಲಿದ್ದಾರೆ. ಎಂದು ಮೃತರ ಮನೆಯವರು ತಿಳಿಸಿದ್ದಾರೆ.