ಸುಳ್ಯದ ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777 ಕನ್ನಡ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

0

ಸುಳ್ಯದ ಕಿರಣ್ ರಾಜ್ ನಿರ್ದೇಶನ ಮಾಡಿ,ರಕ್ಷಿತ್ ಶೆಟ್ಟಿ ನಟಿಸಿದ ಚಾರ್ಲಿ 777 ಕನ್ನಡ ಚಲನಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಕಿರಣ್ ರಾಜ್ ಅವರ ಚಾರ್ಲಿ 777 ಪಡೆದುಕೊಂಡಿದೆ. ಇದು ಸುಳ್ಯದ ಹೆಮ್ಮೆಯಾಗಿದ್ದು, ಸುಳ್ಯ ಕೇರ್ಪಳದ ದಿ. ಅಚ್ಚುತ ಮಣಿಯಾಣಿ ಹಾಗೂ ಶ್ರೀಮತಿ ಗೋದಾವರಿ ದಂಪತಿಯ ಹಿರಿಯ ಪುತ್ರರಾಗಿರುವ ಕಿರಣ್ ರಾಜ್ ಅವರು ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ‌.