ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಹರಿಹರ ಪಲ್ಲತಡ್ಕ ಅಂಗನವಾಡಿಗೆ ಚಯರ್ ಕೊಡುಗೆ

0


ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಹರಿಹರ ಪಳ್ಳತಡ್ಕ ಅಂಗನವಾಡಿಗೆ 20 ಕುರ್ಚಿಗಳನ್ನು ಆ.20 ಹಸ್ತಾಂತರಿಸಲಾಯಿತು . ರೇಗನ್ ಶೆಟ್ಟಿಯಡ್ಕ ,ವಿಷ್ಣು ಪ್ರಸಾದ್ ಪಾತಿಕಲ್ಲು , ಹಿಮ್ಮತ್ ಕೆ ಸಿ, ಕೊಡುಗೆಗಳ ಪ್ರಾಯೋಜಕರಾಗಿದ್ದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಗನವಾಡಿ ಶಿಕ್ಷಕಿ ಹರಿಣಿ ಉಪಸ್ಥಿತರಿದ್ದರು. ವಿಷ್ಣು ಪಾತಿ ಕಲ್ಲು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಕೆ. ಆರ್. ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ ಕೂಜುಗೋಡು ವಂದಿಸಿದರು.