ಸೆ.10: ಅಮರಪಡ್ನೂರು:ಅಕ್ಕೋಜಿಪಾಲ್ಪಂಚಶ್ರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ

0

ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್ ಪಂಚಶ್ರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಶಕ್ತಿನಗರದ ಮೈದಾನದಲ್ಲಿ
14 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ಕಾರ್ಯಕ್ರಮವು ಸೆ.10 ರಂದುನಡೆಯಲಿರುವುದು.
ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸಾರ್ವಜನಿಕರಿಗೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುವುದು.

ಅಕ್ಕೋಜಿಪಾಲ್ ಅನುಗ್ರಹ ಸ್ಟೋರ್ ಮಾಲಕ ನಾರಾಯಣ ಮಂಗಲ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.

ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಉಪಾಧ್ಯಕ್ಷ ಪ್ರವೀಣ್ ಮುಂಡ್ರಾಜೆ ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಬೊಳ್ಳೂರು, ನಿವೃತ್ತ ಪ್ರಾಂಶುಪಾಲರು, ಕೆವಿಜಿ ಪಾಲಿಟೆಕ್ನಿಕ್
ಸುಳ್ಯ ,ಗೌರವಾಧ್ಯಕ್ಷರು ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಅಕ್ಕೋಜಿಪಾಲ್,

ಐತ್ತಪ್ಪ ನಾಯ್ಕ್ ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ,
ಚಂಗ ಅಕ್ಕೋಜಿಪಾಲ್ ಉಪಸ್ಥಿತರಿರುವರು.

ಅಪರಾಹ್ನ ಗಂಟೆ 3-00 ರಿಂದ ಸಮಾರೋಪ ಸಮಾರಂಭವು ಪಂಚಶ್ರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ
ಗೀತೇಂದ್ರ ಕೊಪ್ಪತ್ತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಸಿ.ಎಸ್, ಸೇವಾ ಪ್ರತಿನಿಧಿ
ಶ್ರೀಮತಿ ದಿವ್ಯ ಉರುಂಬಿ, ಕ್ಲಬ್ ಸ್ಥಾಪಕಾಧ್ಯಕ್ಷ
ರವೀಂದ್ರ ಎಂ. ಮಂಗಲ್ಪಾಡಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.