ಮುರುಳ್ಯ ಹಿಂದೂ ಬಾಂಧವರ ಸಮಿತಿ ವತಿಯಿಂದ ಪೂದೆ ದೇವಸ್ಥಾನಕ್ಕೆ ದೇಣಿಗೆ ಕೊಡುಗೆ, ಹಸ್ತಾಂತರ

0

ಪೂದೆ ಅವಳಿ ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು, ಮುರುಳ್ಯ ಹಿಂದೂ ಬಾಂಧವರ ಸಮಿತಿ ವತಿಯಿಂದ ಸೆ. 14ರಂದು ರೂ.10 ಸಾವಿರ ದೇಣಿಗೆ ಹಸ್ತಾಂತರಿಸಲಾಯಿತು.


ಪೂದೆ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ, ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪಗೌಡ ಪೂದೆ, ಕಾರ್ಯದರ್ಶಿ ಕೊಚ್ಚಿ ಪೂದೆ ತಾರಾನಾಥ, ಚೆನ್ನಯಮಜಲು ತಾರಾನಾಥ, ವಿನೂತ್ ಪೂದೆ, ಉಪಸ್ಥಿತಿಯಲ್ಲಿ ಹಿಂದು ಬಾಂಧವರ ಅಧ್ಯಕ್ಷ ಅನೂಪು ಬಿಳಿಮಲೆ, ಕಾರ್ಯದರ್ಶಿ ವಸಂತ ಪೂದೆ, ಸದಸ್ಯ ತಾರಾನಾಥ ಪೂದೆ ಜನರೇಟರ್ ಗಾಗಿ ದೇಣಿಗೆಯನ್ನು ಹಸ್ತಾಂತರಿಸಿದರು.