ಕನಕಮಜಲು: ಕೋಡಿ ತಿರುವಿನಲ್ಲಿ ಮರಬಿದ್ದು ಕೆಲಕಾಲ ರಸ್ತೆ ಸಂಚಾರ ಸ್ಥಗಿತ

0

ಸಕ್ಸಸ್ ಸುಣ್ಣಮೂಲೆ ಸದಸ್ಯರಿಂದ ಮರ ತೆರವು

ಕನಕಮಜಲು ಗ್ರಾಮದ ಕೋಡಿ ತಿರುವಿನಲ್ಲಿ ಸೆ.14ರಂದು ಬೆಳಿಗ್ಗೆ ಮುಖ್ಯರಸ್ತೆಗೆ ಮರ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಮರವನ್ನು ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.

ಕೋಡಿ ತಿರುವಿನಲ್ಲಿ ಪಕ್ಕದ ಗುಡ್ಡದಿಂದ ಗಾಳಿ ಮಳೆಗೆ ಮರಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಕೆಲಹೊತ್ತು ಅಡಚಣೆಯಾಗಿದ್ದು, ಬಳಿಕ
, ಸಕ್ಸಸ್ ಸುಣ್ಣಮೂಲೆ ತಂಡದ ಸದಸ್ಯರಾದ ಹಸನ್, ಅಕ್ಕೀಂ, ಜಮಾಲ್, ರಂಶಾದ್ ಮತ್ತಿತರರು ಸೇರಿ ಮರ ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಿದರೆಂದು ತಿಳಿದುಬಂದಿದೆ.