ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಹಾಸಭೆ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ ಸೆ. 16ರಂದು ಸಂಘದ ಪ್ರಧಾನ ಕಚೇರಿ ಕೋಟೆಮುಂಡುಗಾರಿನಲ್ಲಿ ಸಂಘದ ಅಧ್ಯಕ್ಷರಾದ ಕೆ. ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಎನ್, ಶ್ರೀಮತಿ ಮಾಲಿನಿ ಪ್ರಸಾದ್ ಎನ್. ವಿಶ್ವನಾಥ ರೈ, ಕೆ. ಅಜಿತ್ ರಾವ್, ಬಿ. ಸುಭಾಶ್ಚಂದ್ರ ರೈ, ಭಾರತೀಶಂಕರ ಎ, ಮೇದಪ್ಪ ಗೌಡ ಟಿ, ಸುಬ್ರಹ್ಮಣ್ಯ ಕೆ. ಎಲ್, ಶುಭಕುಮಾರ ಬಿ, ವಿಶ್ವನಾಥ ಪರವ, ಶ್ರೀಮತಿ ಎ. ಪುಷ್ಪಾವತಿ, ಶ್ರೀಮತಿ ಪಂಕಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೂಸಪ್ಪ ಗೌಡ ಮುಗುಪ್ಪು ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ, ಕು. ಗೀತಾ ಎ, ಕು. ಗೀತಾ ಕುಮಾರಿ ಮತ್ತು ಕು. ಶ್ರದ್ಧಾ ಪ್ರಾರ್ಥಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರದಿ ವಾಚಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.