ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ. ಸಂಘದ ಮಹಾಸಭೆ

0

108.02 ಕೋಟಿ ವ್ಯವಹಾರ, 23.43ಲಕ್ಷ ಲಾಭಾಂಶ, ಶೇ. 6 ಡಿವಿಡೆಂಟ್ ಘೋಷಣೆ

ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆಯು ಸೆ. 24ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನ ಸುಬ್ರಹ್ಮಣ್ಯದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ ಕೂಜುಗೋಡು ಅವರ ಅಧ್ಯಕ್ಷತೆಯಲ್ಲಿ ಜರಗಿತು.

2022-2023ನೇ ಸಾಲಿನಲ್ಲಿ ಸಂಘವು 108.02 ಕೋಟಿ ರೂ. ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 23.43ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ಶೇರ್ ದಾರರಿಗೆ ಶೇ. 6 ದರದಲ್ಲಿ ಡಿವಿಡೆಂಟ್ ಕೊಡುವುದಾಗಿ ಘೋಷಿಸಲಾಯಿತು. ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಕೆ.ಯಸ್. ಮಂಡಿಸಿದರು. ವರದಿ ಸಾಲಿನಲ್ಲಿ 17.88 ಕೋಟಿ ಸಾಲ ವಿತರಿಸಿ, 16.61ಕೋಟಿ ಸಾಲ ವಸೂಲಿ ಮಾಡಿ ವರ್ಷಾಖೇರಿಗೆ 17.82 ಕೋಟಿ ಸಾಲ ಇರುತ್ತದೆ. ಶೇ. 93.91ಸಾಲ ವಸೂಲಿಯಾಗಿರುತ್ತದೆ. ಹಿರಿಯ ಸಹಕಾರಿಗಳಾದ ಶ್ರೀ ರಾಮ ಶರ್ಮ ಕೆ ಸುಬ್ರಹ್ಮಣ್ಯ ಮತ್ತು ವಸಂತ ಕುಮಾರ ಕೂಜುಗೋಡು ಐನೆಕಿದು ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ, ಯಸ್.ಯಸ್.ಯಲ್.ಸಿ, ಏಳನೇತರಗತಿ, ಐದನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು, ಸ್ವಂತ ಬಂಡವಾಳದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ ಸದಸ್ಯರನ್ನು, ಅತೀ ಹೆಚ್ಚು ಪಿಗ್ಮಿ ಠೇವಣಿ ನೀಡಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಮಹಾಸಭೆಯ ಹಾಜರಾತಿಯಲ್ಲಿ ದಾಖಲೆಯ ಹಾಜರಾತಿ 1057 ಆಗಿದ್ದು ಶೇ. 67.03 ಆಗಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರುಗಳು ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಾಧವ ಡಿ, ನಿರ್ದೇಶಕರುಗಳಾದ ಸೋಮಸುಂದರ ಕೆ, ರವೀಂದ್ರ ಕುಮಾರ ರುದ್ರಪಾದ, ಮೋಹನದಾಸ ರೈ, ವೆಂಕಟೇಶ. ಹೆಚ್. ಯಲ್, ಸುರೇಶ ಕೋಟೆಬೈಲು, ದಾಮೋದರ ಕೆ , ಕಿರಣ ಪೈಲಾಜೆ, ಸುಬ್ರಹ್ಮಣ್ಯ ರಾವ್ ಎ, ಶ್ರೀಮತಿ ಬಾರತಿ ದಿನೇಶ್, ಶ್ರೀಮತಿ ಆಶಾಕುಮಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಕಾಶ್ ಕೆ.ಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಜಯಪ್ರಕಾಶ ಕೂಜುಗೋಡು ಸ್ವಾಗತಿಸಿ ನಿರ್ದೇಶಕ ರವೀಂದ್ರ ಕುಮಾರ ರುದ್ರಪಾದ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.