ಸುಬ್ರಹ್ಮಣ್ಯ : ಪೌಷ್ಟಿಕ ಆಹಾರದ ಮಾಹಿತಿ ಕಾರ್ಯಕ್ರಮ

0


ಅಂಬಿಕಾ ಗೊಂಚಲು ಸಮಿತಿ ಸುಬ್ರಹ್ಮಣ್ಯ, ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ, ಓಂಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ, ಶ್ರೀ ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ, ಇವುಗಳ ಜಂಟಿ ಆಶ್ರಯದಲ್ಲಿ ಪಂಚಾಯತ್ ಸಭಾಂಗಣದಲ್ಲಿ
ಪೌಷ್ಟಿಕ ಆಹಾರದ ಮಾಹಿತಿ ಕಾರ್ಯಕ್ರಮ ನಡೆಯಿತು.

ಅಂಬಿಕಾ ಗೊಂಚಲಿನ ಅಧ್ಯಕ್ಷರಾದ ಜಯಂತಿ ಭಟ್ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸುಬ್ರಹ್ಮಣ್ಯೈ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಸುಜಾತ ಕಲ್ಲಾಜೆ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ, ಓಂ ಶ್ರೀ ಸಂಜೀವಿನಿ ಒಕ್ಕೂಟಪದಾಧಿಕಾರಿ ತ್ರಿವೇಣಿ ಪಿ ದಾಮ್ಲೆ, ಅಂಬಿಕಾಯ ಗೊಂಚಲು ಸಮಿತಿ ಕಾರ್ಯದರ್ಶಿ ಜಯಶ್ರೀ, ಪ್ರಾಥಮಿಕ ಅರೋಗ್ಯ ಕೇಂದ್ರ ಸುಬ್ರಹ್ಮಣ್ಯ ಇದರ ಸುರಕ್ಷಾ ಅಧಿಕಾರಿ ಹೇಮಲತಾ, ಸುಳ್ಯ ಬ್ಲಾಕ್ ಸೊಸೈಟಿ ಕಾರ್ಯದರ್ಶಿ ಲತಾಶ್ರೀ, ವಾಣಿ ವನಿತಾ ಸಮಾಜದ ಅಧ್ಯಕ್ಷೆ ಹೇಮಾವತಿ ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ದೀಪಿಕಾ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಹೇಮಲತಾ ಅರೋಗ್ಯ ದ ಬಗ್ಗೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ, ಕಲ್ಲಾಜೆ, ಶಾರದಾ ಗುಡ್ಡೆ ಏನೆಕಲ್ಲು, ಕುಲ್ಕುಂದ, ದೇವರಗದ್ದೆ, ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಯರು, ಎಲ್ಲಾ ಸ್ತ್ರೀ ಶಕ್ತಿ ಸಂಘಗಳದ ಸದಸ್ಯರು ಸಂಜೀವಿನಿ ಸಂಘಗಳ ಸದಸ್ಯರು,ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಗೊಂಚಲು ಕಾರ್ಯದರ್ಶಿ ಜಯಶ್ರೀ ನಿರೂಪಿಸಿದರು. ಎಂ ಬಿ.ಕೆ ಹೇಮಾವತಿ ಸ್ವಾಗತಿ ಸಿದರು.ಅಂಗನವಾಡಿ ಧರ್ಮವತಿ ಕಲ್ಲಾಜೆ ಧನ್ಯವಾದ ಸಮರ್ಪಿಸಿದರು