ದರ್ಖಾಸ್ತು ಶ್ರೀ ಶಾರದಾಂಬ ಸೇವಾ ಸಮಿತಿ ಇದರ ಪೂರ್ವ ಭಾವಿ ಸಭೆ ಹಾಗು ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಚಂದ್ರಶೇಖರ ದರ್ಖಾಸ್ತು, ಕಾರ್ಯದರ್ಶಿಯಾಗಿ ರಂಜಿತ್ ದರ್ಖಾಸ್ತು ಖಜಾಂಜಿಯಾಗಿ ಹೊನ್ನಪ್ಪ ದರ್ಖಾಸ್ತು

ಶ್ರೀ ಶಾರದಾಂಬ ಸೇವಾ ಸಮಿತಿ ದರ್ಖಾಸ್ತು ಇದರ 18ನೇ ವರ್ಷದ ಶ್ರೀ ಶಾರದೋತ್ಸವ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆ ನಡೆದಿದ್ದು ಶ್ರೀ ಶಾರದೋತ್ಸವನ್ನು ಅ. 23 ರಂದು ನಡೆಸುವುದೆಂದು ನಿರ್ಣಯಿಸಲಾಯಿತು.


ಬೆಳಿಗ್ಗೆ ಶ್ರಿ ಶಾರದೆಯ ಪ್ರತಿಷ್ಠಾಪನೆ ಮಧ್ಯಾಹ್ನ ಮಹಾಪೂಜೆ ,ಸಂಜೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 24 ರಂದು ಬೆಳಿಗ್ಗೆ ಆಟೋಟ ಸ್ಪರ್ಧೆ, ಸಂಜೆ ಶೋಭಾಯಾತ್ರೆ ನೆಡೆಸುವುದು ಎಂದು ತೀರ್ಮಾನಿಸಲಾಯಿತು. ಹಾಗೂ ಸಮಿತಿಯನ್ನು ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ್ ದರ್ಖಾಸ್ತು ಪುನರಾಯ್ಕೆಯಾದರು. ಕಾಯ೯ದರ್ಶಿ ರಂಜಿತ್ ದರ್ಖಾಸ್ತು ಖಜಾಂಜಿಯಾಗಿ ಹೊನ್ನಪ್ಪ ದರ್ಖಾಸ್ತು, ಗೌರವಾಧ್ಯಕ್ಷರಾಗಿ ಸಂಜೀವ ಶೆಟ್ಟಿ ದರ್ಖಾಸ್ತು, ಗೌರವ ಸಲಹೆಗಾರರಾಗಿ ಗಂಗಾಧರ ರೈ ಪುಡ್ಕಜೆ, ಉಪಾಧ್ಯಕ್ಷರಾಗಿ ಕಂದಸ್ವಾಮಿ ದರ್ಖಾಸ್ತು ಜೊತೆ ಕಾರ್ಯದರ್ಶಿ ನಾಗೇಶ್ ಚೂಂ ತಾರು, ಹಾಗೂ 15 ಜನ ನಿರ್ದೇಶಕರು ಆಯ್ಕೆಯಾದರು. ಮತ್ತು ಶ್ರೀ ಶಾರದಾಂಬ ಮಹಿಳಾ ಸೇವಾ ಸಮಿತಿಯನ್ನು ರಚಿಸಲಾಯಿತು.