ಸುಳ್ಯದಲ್ಲಿ ನಾಳೆ ನಡೆಯಲಿರುವ ಗಾಂಧಿ ಸ್ಮೃತಿ ಹಾಗೂ ಜನಜಾಗೃತಿ ಸಮಾವೇಶಕ್ಕೆ ಭರದ ಸಿದ್ದತೆ- ಸಂಘದ ಸದಸ್ಯರಿಂದ ಅಲಂಕೃತ ವೇದಿಕೆ ನಿರ್ಮಾಣ ಕಾರ್ಯ

0

ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ
ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಾಳೆ ನಡೆಯಲಿರುವ ಗಾಂಧೀ ಸ್ಮೃತಿ ಹಾಗೂ ಜನಜಾಗೃತಿ ಜಾಥಾ ಮತ್ತು ಸಮಾವೇಶದ ಪೂರ್ವಭಾವಿ ಸಿಧ್ಧತಾ ಕಾರ್ಯಗಳು ಭರದಿಂದ ನಡೆಯುತ್ತಿದೆ. ವೇದಿಕೆಯನ್ನು ಹಚ್ಚ ಹಸಿರಿನ ತೆಂಗಿನ ಗರಿ ಹಾಗೂ ಬಿದಿರು ಬಳಸಿ ಅಲಂಕಾರ ಮಾಡುವ ಕಾರ್ಯದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಯೋಜನೆಯ ಮತ್ತು ಒಕ್ಕೂಟದ ಸದಸ್ಯರು , ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ನಿರ್ವಹಿಸುತ್ತಿದ್ದಾರೆ. ಸಂಘದ ಮಹಿಳಾ ಸದಸ್ಯರು ತೆಂಗಿನ ಗರಿಗಳಿಂದ ತಟ್ಟಿ ಹೆಣೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.


ನಗರದಾದ್ಯಂತ ಹಾಗೂ ಗ್ರಾಮಾಂತರಗಳಲ್ಲಿ ಕಾರ್ಯಕ್ರಮಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸಲಾಗಿದೆ. ಕ್ಷೇತ್ರದಿಂದ ಯೋಜನೆಯ ನಿರ್ದೇಶಕರು ಯೋಜನಾಧಿಕಾರಿಗಳು ಆಗಮಿಸಿ ಪೂರ್ವ ಸಿದ್ದತಾ ಕಾರ್ಯದ ನಿಮಿತ್ತ ಬೀಡು ಬಿಟ್ಟಿದ್ದಾರೆ.