ಸುಳ್ಯ ಜ್ಯೋತಿ ವೃತ್ತದ ಬಳಿ ಸರಣಿ ಅಪಘಾತ

0

ಜೀಪು ಸೇರಿದಂತೆ ಮೂರು ವಾಹನಗಳು ಜಖಂ

ಜ್ಯೋತಿ ವೃತ್ತದ ಬಳಿ ಮೂರು ವಾಹನಗಳ ಸರಣಿ ಅಪಘಾತ ಉಂಟಾಗಿ ಘಟನೆಯಿಂದ ಮೂರು ವಾಹನಗಳು ಜಖಂ ಗೊಂಡಿರುವ ಘಟನೆ ಇದೀಗ ವರದಿಯಾಗಿದೆ.


ಘಟನೆಗೆ ಜೀಪು ಚಾಲಕನ ಅಜಾಗರೂಕತೆಯೇ ಕಾರಣ.

ಸರಣಿ ಅಪಘಾತದಲ್ಲಿ ಜಖಂ ಗೊಂಡಿರುವ ವಾಹನಗಳು ಬೆಂಗಳೂರು ಮೂಲದ ಇನೋವಾ ಕಾರು, ಕುಪ್ಪೆಟ್ಟು ಮೂಲದವರ ಟ್ರಿಬರ್ ಕಾರು, ಕೊಡ್ತುಗುಳಿ ಮುರಳೀಧರ ರವರ ಮಗ ಪೃಥ್ವಿಶ್ ಎಂಬುವವರು ಚಲಾಯಿಸುತ್ತಿದ್ದ ಜೀಪು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಇದೇ ಸ್ಥಳದಲ್ಲಿ ನಿನ್ನೆ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿತ್ತು.