ಮೋಡ ಕವಿದ ವಾತಾವರಣ : ದೇವೆಗೌಡರ ಸುಬ್ರಹ್ಮಣ್ಯ ಭೇಟಿ ಕಾರ್ಯಕ್ರಮ ರದ್ದು

0

ಮಾಜಿ ಪ್ರಧಾನಿ ದೇವೇಗೌಡರವರು ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವರಿದ್ದು, ಇದೀಗ ಮೋಡ ಕವಿದ ವಾತಾವರಣವಿರುವುದರಿಂದ ಅವರ ಸುಬ್ರಹ್ಮಣ್ಯ ಭೇಟಿ ಕಾರ್ಯಕ್ರಮ ರದ್ದುಗೊಂಡಿರುವುದಾಗಿ ತಿಳಿದುಬಂದಿದೆ. ಸಕಲೇಶಪುರದಲ್ಲಿ ಭಾಗದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಹೆಲಿಕಾಪ್ಟರ್ ಬರಲು ಅನಾನುಕೂಲ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಈ ದಿನದ ಕಾರ್ಯಕ್ರಮ ರದ್ದುಗೊಂಡಿದೆ.