ಜಸ್ಮಿತಾ ಕೆ.ಪಿ. ದಕ್ಷಿಣ ವಲಯ ಅಂತರರಾಜ್ಯ ಕ್ರೀಡಾಕೂಟಕ್ಕೆ ಆಯ್ಕೆ

0


ಸೆ. 27 ರಿಂದ ಸೆ.30ರವರೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಹಾಗೂ ಯು- 23 ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಯು – 20 ಬಾಲಕಿಯರ ವಿಭಾಗದ 100ಮೀ ಹರ್ಡಲ್ಸ್ ನಲ್ಲಿ ಜಸ್ಮಿತಾ ಕೆ.ಪಿ.ಪ್ರಥಮ ಸ್ಥಾನ ಪಡೆದು ಅ.15 ರಿಂದ ಅ.17ರ ವರೆಗೆ ತೆಲಂಗಾಣದಲ್ಲಿ ನಡೆಯಲಿರುವ ದಕ್ಷಿಣ ವಲಯದ ಅಂತರ್ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ . ಇವರು ಸುಳ್ಯ ಬಸ್ ಡಿಪೋ ಬಳಿಯ ನಿವಾಸಿ ಕುಂಟುಕಾಡು ಕೆ. ಎಂ. ಪದ್ಮಯ್ಯ ಹಾಗೂ ಶ್ರೀಮತಿಅನಿತಾ ದಂಪತಿಗಳ ಪುತ್ರಿ . ಪ್ರಸ್ತುತ ಡಾ| ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅಜ್ಜರಕಾಡು ಉಡುಪಿ ಇಲ್ಲಿ ವ್ಯಾಸಂಗ ಮಾಡುತ್ತಿದ್ದು ಅನಂತರಾಮ್ ಇವರಿಂದ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ.