ಅಡ್ಕಾರು: ಆಪೆ ರಿಕ್ಷಾಕ್ಕೆ ಬೈಕ್ ಢಿಕ್ಕಿ , ಬೈಕ್ ಸವಾರನ ಕಾಲಿಗೆ ಗಾಯ

0

ಆಪೆ ರಿಕ್ಷಾಕ್ಕೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರನ ಕಾಲಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಅ.18ರಂದು ಬೆಳಿಗ್ಗೆ ಸಂಭವಿಸಿದೆ.

ಅಡ್ಕಾರಿನ ತರು ಚಿಕನ್ ಸೆಂಟರ್ ಮಾಲಕ ಶಿವಪ್ರಸಾದ್ ಅವರು ತಮ್ಮ ಅಪೆ ರಿಕ್ಷಾದಲ್ಲಿ ಸುಳ್ಯದಿಂದ ಬಂದು ಅಡ್ಕಾರಿನ ಅಯ್ಯಪ್ಪ ಮಂದಿರದ ಬಳಿ ತಮ್ಮ ಮನೆ ಕಡೆಗೆ ತಿರುಗಿಸುವ ವೇಳೆ ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಉಪ್ಪಿನಂಗಡಿಯ ಯುವಕ ಚಲಾಯಿಸುತ್ತಿದ್ದ ಬೈಕ್ ಅಪೆ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದ್ದು, ಬೈಕ್ ಚಲಾಯಿಸುತ್ತಿದ್ದ ಯುವಕನ ಕಾಲಿಗೆ ಗಾಯವಾಗಿದ್ದು, ಸಹ ಸವಾರ ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾರೆ.

ಗಾಯಗೊಂಡ ಬೈಕ್ ಸವಾರನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿದೆ.