ದೇವಚಳ್ಳ : “ಅಗ್ನಿವೀರ್ ‘ಗೆ ಆಯ್ಕೆಯಾದ ಅಭಿಷೇಕ್ ಮೆತ್ತಡ್ಕ ಹಾಗೂ ಕಾರ್ತಿಕ್ ಚಿದ್ಗಲ್ ರಿಗೆ ಗೌರವ

0

ದೇವಚಳ್ಳ ಗ್ರಾಮದಿಂದ “ಅಗ್ನಿವೀರ್ ‘ಗೆ ಆಯ್ಕೆಯಾದ ಅಭಿಷೇಕ್ ಮೆತ್ತಡ್ಕ ಹಾಗೂ ಕಾರ್ತಿಕ್ ಚಿದ್ಗಲ್ ಇವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಇಂದು ದೇವಚಳ್ಳ ಗ್ರಾ.ಪಂ. ಸಭಾಭವನದಲ್ಲಿ‌ ನಡೆಯಿತು.

ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಧ್ಯಕ್ಷತೆ ವಹಿಸಿದ್ದರು. ‌ವೇದಿಕೆಯಲ್ಲಿ ಸುಬ್ರಹ್ಮಣ್ಯ ವಲಯದ ಸಹಾಯಕ‌ ಅರಣ್ಯ ಸಂರಕ್ಷಣಾ ಧಿಕಾರಿಯಾದ ಪ್ರವೀಣ್ ಶೆಟ್ಟಿ, ನಿವೃತ್ತ ಹವಲ್ದಾರರಾದ ಚಂದ್ರಶೇಖರ ಅಚ್ರಪ್ಪಾಡಿ, ಕ್ಯಾಪ್ಟನ್‌ ಸುದಾನಂದ ಮಾವಿನಕಟ್ಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಸೇವಾಜೆ, ಪಂಚಾಯತ್ ಸದಸ್ಯರು, ಸಿಬ್ಬಂದಿ ಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.