ಎಲಿಮಲೆ : ಅಕ್ಷಯ ವೆಲ್ಡಿಂಗ್ ಸೆಂಟರ್ ವತಿಯಿಂದ ದಿವ್ಯಾಂಗರಿಗೆ ಮಂಚ ವಿತರಣೆ

0

ಎಲಿಮಲೆಯಲ್ಲಿ ಕಾರ್ಯಾಚರಿಸುತ್ತಿರುವ ಹೇಮನಾಥ ಕೋಡ್ತುಗುಳಿ ಮಾಲಕತ್ವದ ಅಕ್ಷಯ ವೆಲ್ಡಿಂಗ್ ಸೆಂಟರ್ ವತಿಯಿಂದ ಪ್ರತಿವರ್ಷ ದಿವ್ಯಾಂಗರಿಗೆ ಕೊಡಮಾಡುವ ಮಂಚವನ್ನು ಈ ಬಾರಿ‌ ಸೇವಾಜೆಯ ಶಿವಪ್ಪ ಗೌಡರ ಪುತ್ರ ಗಗನ್ ದೀಪ್ ರವರಿಗೆ ವಿತರಿಸಲಾಯಿತು.
ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ಮಲಗುವ ಮಂಚವನ್ನು ಅಕ್ಷಯ ವೆಲ್ಡಿಂಗ್ ಸೆಂಟರ್ ನಲ್ಲಿ ಆಯುಧ ಪೂಜೆಯ ದಿನ ಶಿವಪ್ಪ ಗೌಡರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮ್ಹಾಲಕರಾದ ಹೇಮನಾಥ ಕೋಡ್ತುಗುಳಿ, ಪತ್ನಿ ಶ್ರೀಮತಿ ಪ್ರೇಮಾ ಸಹೋದರ ಕೇಶವ ಕೋಡ್ತುಗುಳಿ ಮತ್ತಿತರರು ಉಪಸ್ಥಿತರಿದ್ದರು. ಟೈಲರ್ ಉದಯ ರವಿ ಕಲ್ಚಾರು ಕಾರ್ಯಕ್ರಮ ನಿರೂಪಿಸಿದರು.