ಬೆಳ್ಳಾರೆ: ಹೊಟೇಲ್ ಉಲ್ಲಾಸ್ ಶುಭಾರಂಭ

0

ಉಲ್ಲಾಸ್ ಬ್ರದರ್ಸ್ ಮಾಲಕತ್ವದ ಹೊಟೇಲ್ ಉಲ್ಲಾಸ್ ಅ. 23ರಂದು ಸ್ಥಳಾಂತರಗೊಂಡು ಬೆಳ್ಳಾರೆ ಕೆಳಗಿನ‌ ಪೇಟೆಯಲ್ಲಿ ಶುಭಾರಂಭಗೊಂಡಿತು. ಅ. 20ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಉದಯಕುಮಾರ್ ಗಣಹೋಮ ನೆರವೇರಿಸಿದರು. ಅ. 23ರಂದು ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಅರ್ಚಕರಾದ ಅಣ್ಣು ಭಟ್ ದೀಪ ಬೆಳಗಿಸಿ ಹೋಟೆಲ್ ಉದ್ಘಾಟಿಸಿದರು.


ಉಲ್ಲಾಸ್ ಸಹೋದರರಾದ ವಿಶ್ವನಾಥ, ವಸಂತ ಮತ್ತು ಯಶೋಧರ, ಶ್ರೀ ಗುಣವತಿ ಮರ್ಧೂರಡ್ಕ, ಎಡಮಂಗಲ, ದಮಯಂತಿ ಎಡಮಂಗಲ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ಇಲ್ಲಿ ಮಾಂಸಾಹಾರಿ ಮತ್ತು ಸಸ್ಯಾಹಾರ ಭೋಜನ ದೊರೆಯಲಿದೆ. ಮೀನು ಫ್ರೈ, ತವಾ ಫ್ರೈ, ತಂಪು ಪಾನೀಯ, ಉಪಾಹಾರ, ಕ್ಯಾಟರಿಂಗ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.