ಜಟ್ಟಿಪಳ್ಳ ಕಾರ್ಗಿಲ್ ಬಾಯ್ಸ್ ವತಿಯಿಂದ ದಸರಾ ಸ್ತಬ್ಧ ಚಿತ್ರದ ಮೆರವಣಿಗೆಗೆ ಚಾಲನೆ

0


ಜಟ್ಟಿಪಳ್ಳ ಕಾರ್ಗಿಲ್ ಬಾಯ್ಸ್ ವತಿಯಿಂದ ಸುಳ್ಯ ದಸರಾ ಪ್ರಯುಕ್ತ 6ನೇ ವರ್ಷದ ಸ್ತಬ್ಧ ಚಿತ್ರಕ್ಕೆ ಚಾಲನೆ ಕಾರ್ಯಕ್ರಮ ಜಟ್ಟಿಪಳ್ಳ ಶ್ರೀರಾಮ ಭಜನ ಮಂದಿರದ ಮುಂಭಾಗದಲ್ಲಿ ನಡೆಯಿತು.
ಜಟ್ಟಿಪಳ್ಳ ಹಿರಿಯ ಧಾರ್ಮಿಕ ಮುಖಂಡ ಸಂಜೀವ ಚಾಲನೆ ನೀಡಿದರು.


ಸಾಮಾಜಿಕ ಧುರೀಣ ರಾಮಚಂದ್ರ ಪೆಲ್ತಡ್ಕ ಹಾಗೂ ಕಪಿಲ ಯುವಕ ಮಂಡಲ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಕಜೆ ಉದ್ಘಾಟಿಸಿದರು.
ಜಟ್ಟಿಪಳ್ಳ ಹಿರಿಯ ಉದ್ಯಮಿ ಎನ್ ಎ ಅಬ್ದುಲ್ಲಾ, ನ್ಯಾಯವಾದಿ ನಾರಾಯಣ ಜಟ್ಟಿಪಳ್ಳ, ಸಾಮಾಜಿಕ ಕಾರ್ಯಕರ್ತರ ರಶೀದ್ ಜಟ್ಟಿಪಳ್ಳ, ಬೊಳಿಯಮಜಲು ಫ್ರೆಂಡ್ಸ್ ನ ಮನು ಬೊಳಿಯಮಜಲು,ಜಿತ್ತು ಬೊಳಿಯಮಜಲು, ಸಿಟಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಅಬ್ದುಲ್‌ ರಹಿಮಾನ್‌, ಗ್ರೀನ್ ಬಾಯ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿಹಾಬ್ ಷಾ,ಕಾನತ್ತಿಲ ಫ್ರೆಂಡ್ಸ್ ಅಧ್ಯಕ್ಷ ಲೋಹಿತ್,ಬೀಟ್ ಪೋಲಿಸ್ ರಾಘವೇಂದ್ರ,ಮಾಧವ ಜಟ್ಟಿಪಳ್ಳ,ಲಕ್ಷಣ ಆಚಾರ್ಯ, ಕಾರ್ಗಿಲ್ ಬಾಯ್ಸ್ ನ ಬಾಲಕೃಷ್ಣ ಜಟ್ಟಿಪಳ್ಳ, ಪ್ರಸಾದ್ ಜಟ್ಟಿಪಳ್ಳ, ಪ್ರದೀಪ್ ಜಟ್ಟಿಪಳ್ಳ,ಮಂಜು ಜಟ್ಟಿಪಳ್ಳ, ನಿಶಾಂತ್ ಜಟ್ಟಿಪಳ್ಳ, ನಿತೇಶ್ ಜಟ್ಟಿಪಳ್ಳ,ರಮೇಶ್ ಜಟ್ಟಿಪಳ್ಳ,ಬಾನು ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.


ಕಾರ್ಗಿಲ್ ಬಾಯ್ಸ್ ದಸರಾ ಉತ್ಸವ ಸಮಿತಿ ಅಧ್ಯಕ್ಷ ಗಿರೀಶ್ ಸರ್ವರನ್ನೂ ಸ್ವಾಗತಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯ ನಿರೂಪಿಸಿದರು.